ಕಲಬುರ್ಗಿ: ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ದಲಿತ ಸೇನೆ ಕಾರ್ಯಕರ್ತರು ಮಂಗಳವಾರ ಮನುಸ್ಮೃತಿ ಕೃತಿಯ ಪೋಸ್ಟರ್ ದಹಿಸಿ ಪ್ರತಿಭಟನೆ ಮಾಡಿದರು.
ಡಾ. ಬಿ.ಆರ್.ಅಂಬೇಡ್ಕರ್ ಅವರು 1927ರ ಡಿಸೆಂಬರ್ 25ರಂದು ತಮ್ಮ ಸಾವಿರಾರು ಅನುಯಾಯಿಗಳೊಂದಿಗೆ ಬಹಿರಂಗವಾಗಿ ಮನುಸ್ಮೃತಿಯನ್ನು ದಹಿಸಿ, ಮನುಸ್ಮೃತಿ ಜಾರಿಯನ್ನು ವಿರೋಧಿಸಿದ್ದರು. ಹೀಗಾಗಿ ಅಂದಿನಿಂದ ಪ್ರತಿ ವರ್ಷ ಮನುಸ್ಮೃತಿಯನ್ನು ದಹಿಸಿ ಕೋಮುವಾದಿ ಮನು ವಿರುದ್ಧ ಪ್ರತಿಭಟನೆ ಮಾಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ಹೇಳಿದರು.
ಜಿಲ್ಲಾ ಘಟಕದ ಅಧ್ಯಕ್ಷ ಡಿ.ಕೆ.ಮದನಕರ್, ಶಿವಲಿಂಗ ಚಲಗೇರಿ, ಯೂತ್ ಸಮಿತಿ ಅಧ್ಯಕ್ಷ ಗೌಸ್ ಬಾಬಾ ಜುನೇದಿ, ಸುನಿಲ್ ಮೇಳಕುಂದಾ, ಮಂಜುನಾಥ ಭಂಡಾರಿ, ಪ್ರಭುಲಿಂಗ, ಗುರು ಮಳಗಿ, ಪಂಚಶೀಲ ಚಾಂಬಳ, ವಿನೋದ ಕಾಂಬಳೆ ಇದ್ದರು.