ಶಾಸಕರಾದ ರಾಜಕುಮಾರ ಪಾಟೀಲ್, ಪ್ರಿಯಾಂಕ್ ಖರ್ಗೆ, ಸುಭಾಷ ಗುತ್ತೇದಾರ, ತಿಪ್ಪಣ್ಣಪ್ಪ ಕಮಕನೂರ ಮಾತನಾಡಿ, ಬ್ಯಾಂಕ್ ನ್ನು ಕೆಲವರು ಸ್ವಂತ ಎನ್ನುವಂತೆ ಮಾಡಿಕೊಂಡಿದ್ದಾರೆ. ಬ್ಯಾಂಕ್ನ ನಿರ್ದೇಶಕರು, ಹಿಂದಿನ ಅಧ್ಯಕ್ಷರು ತಮ್ಮ ಮನೆಯ ಸದಸ್ಯರ ಹಾಗೂ ಕೆಲವರ ಹೆಸರಿನಲ್ಲಿ ಸಾಲ ಪಡೆದು ಬ್ಯಾಂಕ್ ದಿವಾಳಿಗೆ ಕಾರಣರಾಗಿದ್ದಾರೆ. ಅದೇ ರೀತಿ ಬ್ಯಾಂಕ್ನ ಅಧಿಕಾರಿಗಳು, ಸಿಬ್ಬಂದಿಯವರೂ ಇದಕ್ಕೆ ಕೈ ಜೋಡಿಸಿದ್ದಾರೆ. ಇದಕ್ಕೆ ಪರಿಹಾರ ಕ್ರಮ ಕೈಗೊಳ್ಳಿ ಎಂದರು.