ರಾಜಕುಮಾರ ಅಂಕಲಗಿ ಮತ್ತು ಅವರ ಸಹೋದರ ಸಂಬಂಧಿಗಳ ಮನೆಗಳು ಒಂದೇ ವಠಾರದಲ್ಲಿವೆ. ರಾಜಕುಮಾರ ಅವರು ಪಾರ್ಶ್ವವಾಯುವಿಗೆ ತುತ್ತಾಗಿದ್ದು, ಅವರನ್ನು ಮನೆಯಲ್ಲಿ ಸೇರಿಸಿಕೊಳ್ಳುವಂತೆ ಸ್ಥಳೀಯ ಮುಖಂಡರಾದ ರಮೇಶ ಪಡಶೆಟ್ಟಿ ಮತ್ತು ರೇವಪ್ಪಉಪ್ಪಿನ ಸಂಬಂಧಿಕರಿಗೆ ತಿಳಿ ಹೇಳಿದರು. ಆದರೂ ಅದಕ್ಕೆ ಒಪ್ಪಿಗೆ ಸಿಗದ ಕಾರಣ ರಾಜಕುಮಾರ ಅವರನ್ನು ಶಾಲೆಯ ಕೋಣೆಯಲ್ಲಿ ಇರಿಸಲಾಗಿತ್ತು.