<p><strong>ಕಲಬುರಗಿ:</strong> ಐದು ತಿಂಗಳ ಬಾಕಿ ವೇತನ ಪಾವತಿಸುವಂತೆ ಆಗ್ರಹಿಸಿ ಮಹಾನಗರ ಪಾಲಿಕೆ ಪೌರಕಾರ್ಮಿಕರು, ಚಾಲಕರು, ಲೋಡರ್ಸ್ ಮತ್ತು ಕ್ಲೀನರ್ಸ್ ಶನಿವಾರ ಪಾಲಿಕೆ ಕಚೇರಿ ಎದುರು ಧರಣಿ ನಡೆಸಿದರು. ನಂತರ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.</p>.<p>‘ಪಾಲಿಕೆಯಲ್ಲಿ 1500ಕ್ಕಿಂತ ಹೆಚ್ಚು ಪೌರಕಾರ್ಮಿಕರು ಸೇವೆ ಸಲ್ಲಿಸುತ್ತಿದ್ದು, 5 ತಿಂಗಳ ವೇತನ ಬಾಕಿ ಇದೆ. 2023ರ ಏಪ್ರಿಲ್ನಿಂದ 2024ರ ಏಪ್ರಿಲ್ವರೆಗೆ ಬಾಕಿ ಇರುವ ಡಿ.ಎ. ₹ 1.06 ಲಕ್ಷ ಸಹ ಪಾವತಿ ಮಾಡುತ್ತಿಲ್ಲ. ವಾರದ ರಜೆ, ಹಬ್ಬದ ರಜೆಗಳ ವಿವರ ಸಲ್ಲಿಸುವಂತೆ ಕಾರ್ಮಿಕ ಆಯುಕ್ತರು ಮೌಖಿಕವಾಗಿ ತಿಳಿಸಿದರೂ ಪಾಲಿಕೆ ಆಯುಕ್ತರು ವಿವರ ನೀಡಿಲ್ಲ’ ಎಂದು ದೂರಿದರು.</p>.<p>‘ಸಂಬಳಕ್ಕೆ ತಕ್ಕಂತೆ ಪಿಎಫ್ ಕಡಿತಗೊಳಿಸಬೇಕು. ಬಾಕಿ ಶೇ 50ರಷ್ಟು ಜನರಿಗೆ ಇಎಸ್ಐ ಕಾರ್ಡ್ ವಿತರಿಸಬೇಕು. 2017ರ ಜನವರಿಯಿಂದ 2023ರ ನವೆಂಬರ್ವರೆಗೆ ಭಾನುವಾರದ ರಜೆ ನೀಡದೆ ಕೆಲಸ ಮಾಡಿಸಿಕೊಂಡಿದ್ದು, ಇದರ ಸಂಬಳವೂ ಕೊಡಬೇಕು’ ಎಂದು ಒತ್ತಾಯಿಸಿದರು.</p>.<p>42 ಜನ ಸಹಿ ಮಾಡಿದ್ದ ಮನವಿಯನ್ನು ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಸಲ್ಲಿಸಲಾಯಿತು. ಶಿವಶರಣಪ್ಪ ಹೊಸಮನಿ, ಭಾರತಬಾಯಿ ಶಂಕರ, ರಾಣೋಜಿ ಸಾಯಿಬಣ್ಣ, ಶಿವಪುತ್ರ ಮುಡ್ಡಿ, ಮಲ್ಲಪ್ಪ ಬಾವೆ, ಪೀರಪ್ಪ ಸೇರಿದಂತೆ ನೂರಾರು ಪೌರಕಾರ್ಮಿಕರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರಗಿ:</strong> ಐದು ತಿಂಗಳ ಬಾಕಿ ವೇತನ ಪಾವತಿಸುವಂತೆ ಆಗ್ರಹಿಸಿ ಮಹಾನಗರ ಪಾಲಿಕೆ ಪೌರಕಾರ್ಮಿಕರು, ಚಾಲಕರು, ಲೋಡರ್ಸ್ ಮತ್ತು ಕ್ಲೀನರ್ಸ್ ಶನಿವಾರ ಪಾಲಿಕೆ ಕಚೇರಿ ಎದುರು ಧರಣಿ ನಡೆಸಿದರು. ನಂತರ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.</p>.<p>‘ಪಾಲಿಕೆಯಲ್ಲಿ 1500ಕ್ಕಿಂತ ಹೆಚ್ಚು ಪೌರಕಾರ್ಮಿಕರು ಸೇವೆ ಸಲ್ಲಿಸುತ್ತಿದ್ದು, 5 ತಿಂಗಳ ವೇತನ ಬಾಕಿ ಇದೆ. 2023ರ ಏಪ್ರಿಲ್ನಿಂದ 2024ರ ಏಪ್ರಿಲ್ವರೆಗೆ ಬಾಕಿ ಇರುವ ಡಿ.ಎ. ₹ 1.06 ಲಕ್ಷ ಸಹ ಪಾವತಿ ಮಾಡುತ್ತಿಲ್ಲ. ವಾರದ ರಜೆ, ಹಬ್ಬದ ರಜೆಗಳ ವಿವರ ಸಲ್ಲಿಸುವಂತೆ ಕಾರ್ಮಿಕ ಆಯುಕ್ತರು ಮೌಖಿಕವಾಗಿ ತಿಳಿಸಿದರೂ ಪಾಲಿಕೆ ಆಯುಕ್ತರು ವಿವರ ನೀಡಿಲ್ಲ’ ಎಂದು ದೂರಿದರು.</p>.<p>‘ಸಂಬಳಕ್ಕೆ ತಕ್ಕಂತೆ ಪಿಎಫ್ ಕಡಿತಗೊಳಿಸಬೇಕು. ಬಾಕಿ ಶೇ 50ರಷ್ಟು ಜನರಿಗೆ ಇಎಸ್ಐ ಕಾರ್ಡ್ ವಿತರಿಸಬೇಕು. 2017ರ ಜನವರಿಯಿಂದ 2023ರ ನವೆಂಬರ್ವರೆಗೆ ಭಾನುವಾರದ ರಜೆ ನೀಡದೆ ಕೆಲಸ ಮಾಡಿಸಿಕೊಂಡಿದ್ದು, ಇದರ ಸಂಬಳವೂ ಕೊಡಬೇಕು’ ಎಂದು ಒತ್ತಾಯಿಸಿದರು.</p>.<p>42 ಜನ ಸಹಿ ಮಾಡಿದ್ದ ಮನವಿಯನ್ನು ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಸಲ್ಲಿಸಲಾಯಿತು. ಶಿವಶರಣಪ್ಪ ಹೊಸಮನಿ, ಭಾರತಬಾಯಿ ಶಂಕರ, ರಾಣೋಜಿ ಸಾಯಿಬಣ್ಣ, ಶಿವಪುತ್ರ ಮುಡ್ಡಿ, ಮಲ್ಲಪ್ಪ ಬಾವೆ, ಪೀರಪ್ಪ ಸೇರಿದಂತೆ ನೂರಾರು ಪೌರಕಾರ್ಮಿಕರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>