‘ಪ್ರಕೃತಿಯ ಮುನಿಸು ಎಷ್ಟು ದೊಡ್ಡ ಹಾನಿ ತಂದೊಡ್ಡುತ್ತದೆ ಎಂಬುದನ್ನು ನಾವು ಪದೇಪದೇ ನೋಡುತ್ತಿದ್ದೇವೆ. ಆದರೆ, ಇದರಿಂದ ಪಾಠ ಕಲಿತು ಸುಧಾರಿಸುತ್ತಿದ್ದೇವೆ ಅನಿಸುತ್ತಿಲ್ಲ. ನಿಸರ್ಗ ತನ್ನಷ್ಟಕ್ಕೇ ತಾನೇ ಮಾಡಿಕೊಳ್ಳುವ ಪರಿವರ್ತನೆಗಳ ಮುಂದೆ ಮನುಷ್ಯ ಬಹಳಷ್ಟು ಚಿಕ್ಕವನಾಗುತ್ತಾನೆ. ಸಂಕಷ್ಟದಿಂದ ಪಾರಾಗಲು ಪ್ರವಾಹ, ಅತಿವೃಷ್ಟಿ, ಬರದಂಥ ವಿಕೋಪಗಳನ್ನು ಇನ್ನಷ್ಟು ವೈಜ್ಞಾನಿಕವಾಗಿ ಅರಿತುಕೊಳ್ಳಬೇಕಿದೆ’ ಎಂದು ಅವರು ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.