ಜೆಡಿಎಸ್ ಸಾಲ ಮನ್ನಾ ಮಾಡುವುದಾಗಿ ರಾಜ್ಯದ ಮತದಾರನಿಗೆ ಭರವಸೆ ನೀಡಿದ್ದು ಸತ್ಯ. ಆದರೆ, ಬಹುಮತದಿಂದ ಆರಿಸಿ ಬಂದಲ್ಲಿ ಅಧಿಕಾರ ಹಿಡಿದ 24 ಗಂಟೆಯೊಳಗೆ ಮನ್ನಾ ಮಾಡುವುದಾಗಿ ಪಕ್ಷದ ವರಿಷ್ಠರು ತಿಳಿಸಿದ್ದರು. ಈಗ ರಾಜಕೀಯ ಅತಂತ್ರ ಸ್ಥಿತಿಯಲ್ಲಿ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಸ್ಥಾನಕ್ಕೇರಿದ್ದು, ವಿರೋಧ ಪಕ್ಷದವರು ಪ್ರಸ್ತುತ ರಾಜಕೀಯ ಸ್ಥಿತಿಗತಿಯನ್ನು ಅರ್ಥ ಮಾಡಿಕೊಂಡು ಹೋರಾಟ ಮಾಡುವುದು ಒಳಿತು ಎಂದ ಅವರು, ಕೃಷಿ ಸಾಲ ಮನ್ನಾ ಮಾಡುವ ವಿಷಯ ಕೈ ಬಿಟ್ಟಿಲ್ಲ. ರಾಜ್ಯದ ಮತದಾರರು ಆತಂಕಪಡುವ ಅವಶ್ಯವಿಲ್ಲ ಎಂದರು.