<p><strong>ಕಲಬುರಗಿ:</strong> ‘ದೇವರನ್ನು ಜಾತಿ- ಧರ್ಮದ ಬೇಲಿಯೊಳಗೆ ಬಂಧಿಸಬೇಡಿ. ಅವನ ಹೆಸರಿನಲ್ಲಿ ಸಮಾಜವನ್ನು ಒಡೆಯಬೇಡಿ’ ಎಂದು ಚಿನ್ಮಯಗಿರಿಯ ಗುರುಮಹಾಂತೇಶ್ವರ ಮಠದ ವೀರಮಹಾಂತೇಶ್ವರ ಶಿವಾಚಾರ್ಯರು ಹೇಳಿದರು.</p>.<p>ತಾಲ್ಲೂಕಿನ ಕಡಣಿಯಲ್ಲಿ ಶಂಕರಲಿಂಗೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ಹಮ್ಮಿಕೊಂಡ ಲಚ್ಯಾಣದ ಸಿದ್ಧಲಿಂಗ ಮಹಾರಾಜರ ಪುರಾಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಮನುಷ್ಯ ಮತ್ತು ದೇವರ ನಡುವಿನ ಸಂಬಂಧ, ಜಾತಿ, ಧರ್ಮಗಳ ಜೊತೆ ಹೋಲಿಕೆ ಮಾಡುವುದು ಸಲ್ಲದು ಎಂದಿರುವ ಅವರು, ಜಾತಿವಾದಿಗಳ ವಿಚಾರಗಳಿಗೆ ಮರಳಾಗಬೇಡಿ ಎಂದರು.</p>.<p>ಕಾಂಗ್ರೆಸ್ ಮುಖಂಡ ಶರಣಗೌಡ ಪಾಟೀಲ ಪುರಾಣ ಕಾರ್ಯಕ್ರಮಕ್ಕೆ ಚಾಲನೆ ಮಾಡಿದರು.</p>.<p>ಜೋಗೂರಿನ ಗುರುಲಿಂಗಯ್ಯ ಸ್ವಾಮಿ ಗಣಾಚಾರಿ, ಕಡಣಿ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಮಲ್ಲೇಶಪ್ಪ ಇಸರಿ, ನಿರ್ದೇಶಕರಾದ ಭೀಮಶಾ ಪಾಟೀಲ, ಗುಂಡೇರಾಯ ಈಶ್ವರಪ್ಪ ಕರಿಕಲ್, ಅಶೋಕ ಹದರಿ, ಶ್ಯಾಮರಾವ ಸೋನಾರ, ರಾಜಶೇಖರ ಕಡ್ಲಾ, ತೇಜಿರಾಯ ಆಲಗೂಡ ಸೇರಿದಂತೆ ಇತರರು ಹಾಜರಿದ್ದರು.</p>.<p>ವಕೀಲ ದೇವೆಂದ್ರ ಎಕಲೂರ ನಿರೂಪಿಸಿ, ಸ್ವಾಗತಿಸಿದರು. ಸಂತೋಷ ಹರಸೂರಮಠ ಅವರ ಸಂಗೀತಕ್ಕೆ ಸುರೇಶ ಆಳಂದ ತಬಲಾ ಸಾಥ್ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರಗಿ:</strong> ‘ದೇವರನ್ನು ಜಾತಿ- ಧರ್ಮದ ಬೇಲಿಯೊಳಗೆ ಬಂಧಿಸಬೇಡಿ. ಅವನ ಹೆಸರಿನಲ್ಲಿ ಸಮಾಜವನ್ನು ಒಡೆಯಬೇಡಿ’ ಎಂದು ಚಿನ್ಮಯಗಿರಿಯ ಗುರುಮಹಾಂತೇಶ್ವರ ಮಠದ ವೀರಮಹಾಂತೇಶ್ವರ ಶಿವಾಚಾರ್ಯರು ಹೇಳಿದರು.</p>.<p>ತಾಲ್ಲೂಕಿನ ಕಡಣಿಯಲ್ಲಿ ಶಂಕರಲಿಂಗೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ಹಮ್ಮಿಕೊಂಡ ಲಚ್ಯಾಣದ ಸಿದ್ಧಲಿಂಗ ಮಹಾರಾಜರ ಪುರಾಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಮನುಷ್ಯ ಮತ್ತು ದೇವರ ನಡುವಿನ ಸಂಬಂಧ, ಜಾತಿ, ಧರ್ಮಗಳ ಜೊತೆ ಹೋಲಿಕೆ ಮಾಡುವುದು ಸಲ್ಲದು ಎಂದಿರುವ ಅವರು, ಜಾತಿವಾದಿಗಳ ವಿಚಾರಗಳಿಗೆ ಮರಳಾಗಬೇಡಿ ಎಂದರು.</p>.<p>ಕಾಂಗ್ರೆಸ್ ಮುಖಂಡ ಶರಣಗೌಡ ಪಾಟೀಲ ಪುರಾಣ ಕಾರ್ಯಕ್ರಮಕ್ಕೆ ಚಾಲನೆ ಮಾಡಿದರು.</p>.<p>ಜೋಗೂರಿನ ಗುರುಲಿಂಗಯ್ಯ ಸ್ವಾಮಿ ಗಣಾಚಾರಿ, ಕಡಣಿ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಮಲ್ಲೇಶಪ್ಪ ಇಸರಿ, ನಿರ್ದೇಶಕರಾದ ಭೀಮಶಾ ಪಾಟೀಲ, ಗುಂಡೇರಾಯ ಈಶ್ವರಪ್ಪ ಕರಿಕಲ್, ಅಶೋಕ ಹದರಿ, ಶ್ಯಾಮರಾವ ಸೋನಾರ, ರಾಜಶೇಖರ ಕಡ್ಲಾ, ತೇಜಿರಾಯ ಆಲಗೂಡ ಸೇರಿದಂತೆ ಇತರರು ಹಾಜರಿದ್ದರು.</p>.<p>ವಕೀಲ ದೇವೆಂದ್ರ ಎಕಲೂರ ನಿರೂಪಿಸಿ, ಸ್ವಾಗತಿಸಿದರು. ಸಂತೋಷ ಹರಸೂರಮಠ ಅವರ ಸಂಗೀತಕ್ಕೆ ಸುರೇಶ ಆಳಂದ ತಬಲಾ ಸಾಥ್ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>