ಅಬ್ದುಲ್ ಮುಜಾವರ್ ಮಾತನಾಡಿ, ‘ಬಡತನದಲ್ಲಿ ಮಕ್ಕಳನ್ನು ಕಟ್ಟಿಕೊಂಡು ಬೆಳೆದು ನಿಂತ ಮಗಳ ಮದುವೆ ಮಾಡಬೇಕೆಂದು ಮದುವೆ ಸಾಮಾನು ಖರೀದಿಸಿ ಮನೆಯಲ್ಲಿಟ್ಟು ಹೊಟ್ಟೆಪಾಡಿಗಾಗಿ ಮಹಾರಾಷ್ಟ್ರಕ್ಕೆ ಹೋಗಿದ್ದಾಗ ನಮ್ಮ ಮನೆ ಸುಟ್ಟಿದೆ. ಆದರೆ ನಮಗೆ ಪರಿಚಿತರಾಗಿರದಿದ್ದರೂ ಕೂಡ ನಮ್ಮ ಕಷ್ಟ ನೋಡಿ ವೈದ್ಯರು ನಮಗೆ ಇದ್ದ ಮನೆಗಿಂತ ಚೆನ್ನಾದ ಎರಡು ಶೆಡ್ಡಿನ ಮನೆ ನಿರ್ಮಿಸಿಕೊಟ್ಟಿದ್ದಾರೆ. ಬಡ ಕುಟುಂಬಕ್ಕೆ ಆಸರೆಯಾಗಿದ್ದಾರೆ. ಆದರೆ ಇಲ್ಲಿಯವರೆಗೆ ಯಾವ ಅಧಿಕಾರಿಯಾಗಳಿ ಜನಪ್ರತಿನಿಧಿಯಾಗಲೀ ಪರಿಹಾರ ನೀಡಿಲ್ಲ ಎಂದರು
ಗ್ರಾಮದ ಮುಖಂಡರಾದ ಚಂದ್ರಾಮ ಹಾವಳಗಿ, ಮಲ್ಲು ಉನ್ನದ, ಶಂಕರಲಿಂಗ ಮೋಸಲಗಿ, ಸಿದ್ದಪ್ಪ ಅವಟಗಿ, ಅಶೋಕ ಸಾಪಳೆ, ಸಂತೋಷ ಸಲಗರ, ಸಂತೋಷ ಆಲೇಗಾಂವ, ಸಿದ್ದಾರಾಮ ಆಲೇಗಾಂವ, ಸಿದ್ದಾರಾಮ ಆಲಮೇಲ, ದ್ಯಾವಪ್ಪ ಪೂಜಾರಿ, ಗೌಸ್ ನಿಗೇವಾನ್, ಮೌಲಾಸಾಹೇಬ ಮುಲ್ಲಾ, ಆಶಾಬಿ ಅಬ್ದುಲ್ ಮುಜಾವ ಇದ್ದರು.