ಬಸವೇಶ್ವರ ದೇವಾಲಯ ಹಳೆ ಊರು ಹಾಗೂ ಹೊಸ ಊರಿನ ಮಧ್ಯೆ ಬರುವ ಮುಲ್ಲಾಮಾರಿ ನದಿ ದಂಡೆಯ ಮೇಲಿದೆ. ಇಲ್ಲಿ ಮಾ.27ರಂದು ಹುಂಡಿ ಕಳ್ಳತನಕ್ಕೆ ಯತ್ನ ನಡೆದಿತ್ತು. ಹುಂಡಿ ಪೆಟ್ಟಿಗೆ ದೇವಾಲಯದಿಂದ ಹೊರಗಡೆ ತಂದಿದ್ದರು. ಅಷ್ಟರಲ್ಲಿ ಜನರು ಬಂದಿದ್ದರಿಂದ ಕಳ್ಳರು ಕಾಲ್ಕಿತ್ತಿದ್ದರು. ಆದರೆ, ಭಾನುವಾರ ರಾತ್ರಿ ಕಳ್ಳರು ಹುಂಡಿ ದೋಚುವಲ್ಲಿ ಯಶಸ್ವಿಯಾಗಿದ್ದಾರೆ.