‘ತಾಲ್ಲೂಕಿನ ಹೊನ್ನಕಿರಣಗಿ ನಿವಾಸಿ ಮಹಾನಂದಾ ಅಟ್ಟದಮನಿ (22) ಮೃತರು. ಮಹಾನಂದಾ ಪತಿ ರಾಜು ಮಲ್ಲಣ್ಣ ಅಟ್ಟದಮನಿ, ಮಾವ ಮಲ್ಲಣ್ಣ ಅಟ್ಟದಮನಿ, ಭಾವಂದಿರಾದ ಸಂತೋಷ ಮಲ್ಲಣ್ಣ, ಹಣಮಂತ ಮಲ್ಲಣ್ಣ, ನೇಗಣಿಯರಾದ ಚಂದ್ರಕಲಾ ಸಂತೋಷ ಮತ್ತು ಕಾವೇರಿ ಮಲ್ಲಣ್ಣ ಅವರ ವಿರುದ್ಧ ಪ್ರಕರಣ ದಾಖಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
‘ಪತಿಯ ಮನೆಯವರು ವರದಕ್ಷಿಣೆ ಹಣ ಮತ್ತು ಚಿನ್ನ ತರುವಂತೆ ಆಗಾಗ ಕಿರುಕುಳ ಕೊಡುತ್ತಿದ್ದರು. ಈ ಬಗ್ಗೆ ತಿಳಿ ಹೇಳಲು ಮನೆಗೆ ಹೋದಾಗ ಬೆದರಿಸಿದ್ದರು. ಮಂಗಳವಾರ ಬೆಳಿಗ್ಗೆ ನನಗೆ ಕರೆ ಮಾಡಿದ ಅಳಿಯ ರಾಜು. ‘ಮಹಾನಂದಾ ಕ್ರಿಮಿನಾಶಕ ಔಷಧಿ ಕುಡಿದಿದ್ದಾಳೆ. ಕಲಬುರಗಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದೇವೆ’ ಎಂದು ಹೇಳಿದ. ಕೆಲ ಹೊತ್ತಿನ ಬಳಿಕ ಕಲಬುರಗಿಗೆ ಬರುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾಗಿ ತಿಳಿಸಿದ’ ಎಂದು ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ರಾಜು ನನ್ನು ಪ್ರಶ್ನಿಸಿದ್ದಕ್ಕೆ ಅಲ್ಲಿಂ ಓಡಿ ಹೋದ’ ಎಂದು ಸಿದ್ದರಾಮ ಹೇಳಿದ್ದಾರೆ.