‘ನಾನು ಸಂಸದನಾದ ಆರೇ ತಿಂಗಳಿಗೆ ಕೊರೊನಾ ಉಪಟಳ ಆರಂಭವಾಯಿತು. ಅಭಿವೃದ್ಧಿಗಿಂತ ಹೆಚ್ಚಾಗಿ ನಾನು ಜನರ ಪ್ರಾಣ ರಕ್ಷಣೆಗೆ ಒತ್ತುಕೊಟ್ಟೆ. ಆಕ್ಸಿಜನ್, ಬೆಡ್, ರೆಮ್ಡಿಸಿವಿರ್ ಸೇರಿದಂತೆ ಹಲವುಬಾರಿ ನಾನೇ ಖುದ್ದಾಗಿ ಔಷಧಿಗಳನ್ನು ತಂದೆ. ಕಠಿಣ ಪರಿಸ್ಥಿತಿಯಲ್ಲೂ ಜನರೊಂದಿಗೆ ಇದ್ದೆ. ಸಂಸತ್ನ ಪ್ರತಿ ಅಧಿವೇಶನದಲ್ಲೂ ನಾನು ಜಿಲ್ಲೆಯ ಸಮಸ್ಯೆಗಳನ್ನು ಎತ್ತಿ ಹೇಳಿದ್ದೇನೆ’ ಎಂದರು.