ಕಾಳಜಿ ಕೇಂದ್ರ ಸ್ಥಗಿತ: ಗ್ರಾಮದಲ್ಲಿ ತೆರೆದ ಕಾಳಜಿ ಕೇಂದ್ರ ಗ್ರಾಮಸ್ಥರ ಬಹಿಷ್ಕಾರದಿಂದಾಗಿ 3 ದಿನಗಳಿಂದ ಸ್ಥಗಿತಗೊಳಿಸಲಾಗಿದೆ. ನ 8ರಂದು ದೇಶದ ವಿವಿಧ ಭೂವಿಜ್ಞಾನ ಮತ್ತು ಭೂಕಂಪ ಸಂಶೋಧನಾ ಸಂಸ್ಥೆಗಳ ವಿಜ್ಞಾನಿಗಳು ಗಡಿಕೇಶ್ವಾರ ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದ್ದರು. ನ.9ರಂದು ಭೂಕಂಪ ತಜ್ಞರು ಕಲಬುರಗಿಯಲ್ಲಿ ಕಾರ್ಯಾಗಾರ ನಡೆಸಿದ್ದಲ್ಲದೇ ಸರ್ಕಾರ ಭೂಕಂಪನದ ಕುರಿತು 5 ದಿನಗಳಲ್ಲಿ ವರದಿ ನೀಡುವುದಾಗಿ ತಿಳಿಸಿದ್ದಾರೆ.