ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭೂ ಕಂಪನದ ಮಾಹಿತಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ವಿವರಿಸಲಾಗಿದೆ. ಕೇಂದ್ರದಿಂದ ಭೂಕಂಪನ ಸರ್ವೆಗೆ ತಂಡ ಬರಲಿದೆ. ಭೂ ಕಂಪನವಾಗಿರುವ ಸಂಪಾಜೆ, ಕೊಡಗು ಸಂಪಾಜೆ, ಚೆಂಬು, ಪೆರಾಜೆ, ಅರಂತೋಡು, ತೊಡಿಕಾನ ಅಸುಪಾಸಿನಲ್ಲಿ ಸರ್ವೆ ನಡೆಯಲಿದೆ. ಕಂಪನದಿಂದ ದೊಡ್ಡ ಸಮಸ್ಯೆ ಆಗಿಲ್ಲ. ಆದರೂ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.