‘ಶರಣಬಸವೇಶ್ವರ ವಿದ್ಯಾವರ್ಧಕ ಸಂಘವು ಮಹಿಳೆಯರಿಗೆ ಹಲವಾರು ವರ್ಷಗಳಿಂದ ಜ್ಞಾನದಾಸೋಹ ಮಾಡುತ್ತ ಬಂದಿದೆ. ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಶರಣಬಸವಪ್ಪ ಅಪ್ಪ ಅವರು ಹೆಣ್ಣು ಮಕ್ಕಳಿಗಾಗಿ ಎಂಜಿನಿಯರಿಂಗ್, ಎಂಬಿಎ, ವಿಜ್ಞಾನ, ಕಲಾ, ವಾಣಿಜ್ಯ ಮತ್ತು ಪತ್ರಿಕೋದ್ಯಮ ಕಾಲೇಜುಗಳನ್ನು ಆರಂಭಿಸಿ, ವಿದ್ಯಾವಂತರನ್ನಾಗಿ ಮಾಡಿದ್ದಾರೆ. ಈ ಸಂಸ್ಥೆಯಲ್ಲಿ ಕಲಿತಿರುವ ಎಷ್ಟೋ ಮಹಿಳೆಯರು ಇಂದು ಉನ್ನತ ಸ್ಥಾನದಲ್ಲಿದ್ದಾರೆ’ ಎಂದರು.