ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ ವಲಯ: ಕಡ್ಲೇವಾಡ ಬಣಕ್ಕೆ ಬಹುಮತ

Last Updated 25 ಫೆಬ್ರುವರಿ 2020, 10:54 IST
ಅಕ್ಷರ ಗಾತ್ರ

ಕಲಬುರ್ಗಿ: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕಾರ್ಯಕಾರಿ ಸಮಿತಿಗೆ ನಡೆದ ಚುನಾವಣೆಯಲ್ಲಿ ಕಲಬುರ್ಗಿ ವಲಯದಿಂದ ಸ್ಪರ್ಧಿಸಿದ್ದ ಗಿರೀಶ ಕಡ್ಲೇವಾಡ ಬಣದ ಐವರು ಚುನಾಯಿತರಾಗಿದ್ದಾರೆ. ಸಂಗಮೇಶ ಹಿರೇಮಠ ಗುಂಪಿನ ಒಬ್ಬರು ಚುನಾಯಿತರಾಗಿದ್ದಾರೆ.

ಪರಿಷತ್ತಿನ ಗೌರವ ಕಾರ್ಯದರ್ಶಿಯೂ ಆಗಿರುವ ಗಿರೀಶ ಕಡ್ಲೇವಾಡ, ಬೀದರ್‌ನ ಅಣದೂರು ಮಹಾರುದ್ರಪ್ಪ, ಪ್ರಕಾಶ ಲಕ್ಕಶೆಟ್ಟಿ, ಯಾದಗಿರಿಯ ಸೂರ್ಯಪ್ರಕಾಶ್ ಘನಾತೆ ಮತ್ತು ಪರಿಶಿಷ್ಟ ಮೀಸಲು ಸ್ಥಾನಕ್ಕೆ ರಾಯಚೂರಿನ ಡಾ.ಕುಂಟೆಪ್ಪ ಗೌರಿಪುರ ಅವರು ಆಯ್ಕೆಯಾದರು.

ಸಂಗಮೇಶ ಹಿರೇಮಠ ಬಣದಿಂದ ದಾನಿ ಬಾಬುರಾವ ಮಾತ್ರ ಗೆಲುವು ಕಂಡರು. ಪ್ರತಿ ಮೂರು ವರ್ಷಗಳಿಗೊಮ್ಮೆ ರಾಜ್ಯದ ನಾಲ್ಕು ಕಂದಾಯ ವಿಭಾಗಗಳಲ್ಲಿ ಚುನಾವಣೆ ನಡೆಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT