‘ಮಳೆಯಿದ್ದಾಗ ನೀರಿನ ಅವಶ್ಯಕತೆ ಇರಲಿಲ್ಲ. ಈಗ ಮಳೆ ಹೋಗಿ 15 ದಿನಗಳಾಗಿದೆ. ಬೆಳೆಗಳಿಗೆ ನೀರು ಉಣಿಸದಿದ್ದರೆ ಕೈತಪ್ಪಿ ಹೋಗುತ್ತದೆ. ದುಬಾರಿ ಬೀಜ, ರಸಗೊಬ್ಬರ ಎಲ್ಲವೂ ಹಾಳಾಗಿ ಹೋಗುವ ಭೀತಿ ಉಂಟಾಗಿದೆ. ಬೇಗ ವಿದ್ಯುತ್ ಸಮಸ್ಯೆ ಪರಿಹರಿಸಿ ಸಮಸ್ಯೆಗೆ ಮುಕ್ತಿ ಹಾಡಬೇಕು' ಎಂದು ರೈತರಾದ ಥಾವರು ರಾಠೋಡ, ಪೂಮು ಚಂದು, ಖೀರು ಜಾಮ್ಲಾ, ಸಂತೋಷ ದೇವು ರಾಠೋಡ, ಡಾಕು ಕಸನು ಅಳಲು ತೋಡಿಕೊಂಡರು.