‘ಉದ್ಯೋಗ ಖಾತ್ರಿ ಯೋಜನೆಯಡಿ 60 ವರ್ಷ ಮೇಲಿನವರು, ಅಂಗವಿಕಲರು, ಕಣ್ಣು ಕಾಣದೇ ಇರುವವರಿಗೂ ಉದ್ಯೋಗ ನೀಡಲು ಅವಕಾಶವಿದೆ. ಪ್ರತಿ ನಿತ್ಯ ₹259 ಕೂಲಿ ಹಣ ನೀಡಲಾಗುತ್ತದೆ. ಖಾತ್ರಿ ಯೋಜನೆಯಡಿ ಕೊಳವೆಬಾವಿಗಳ ಜಲಮರುಪೂರಣ, ಕೃಷಿ ಹೊಂಡ, ತೋಟಗಾರಿಕೆ ಬೆಳೆ, ರೇಷ್ಮೆ ಬೆಳೆಯಬಹುದು. ಅಂಗನವಾಡಿ ಕಟ್ಟಡ, ಅಂಗನವಾಡಿ ಹಾಗೂ ಶಾಲೆಗಳಿಗೆ ಕಾಂಪೌಂಡ್, ಶೌಚಾಲಯ ನಿರ್ಮಿಸಲೂ ಅವಕಾಶವಿದೆ’ ಎಂದು ಮಾಹಿತಿ ನೀಡಿದರು.