‘ನಾಥೂರಾಮ್ ಗೋಡ್ಸೆ ಬಗ್ಗೆ ಇವರು ನೀಡಿರುವ ಹೇಳಿಕೆಗಳನ್ನು ಗಮನಿಸಿದಾಗ ಬಿಜೆಪಿಗೆ ಗಾಂಧೀಜಿ ಬಗ್ಗೆ ಇರುವ ಅಗೌರವ ಬಹಿರಂಗವಾಗಿದೆ. ಬಿಜೆಪಿಗೆ ಯಾವತ್ತೂ ಗಾಂಧೀಜಿ ಮೇಲೆ ವಿಶ್ವಾಸವಿಲ್ಲ. ವಿಶೇಷವಾಗಿ ಸಂಘ ಪರಿವಾರದವರು ಗಾಂಧೀಜಿ ಅವರನ್ನು ಒಪ್ಪುವುದಿಲ್ಲ. ತನ್ನ ಆಸ್ತಿ, ಅಂತಸ್ತು ಬಿಟ್ಟು ಹಗಲಿರುಳು ಸ್ವಾತಂತ್ರ್ಯಕ್ಕಾಗಿ ಹೋರಾಡಿ, ಸ್ವಾತಂತ್ರ್ಯ ದೊರಕಿಸಿಕೊಟ್ಟ ಗಾಂಧೀಜಿ ಅವರನ್ನು ಇಡೀ ದೇಶವೇ ರಾಷ್ಟ್ರಪಿತ ಎಂದು ಕರೆಯುತ್ತದೆ. ಆದರೆ, ಬಿಜೆಪಿಯವರು ಗಾಂಧೀಜಿ ಅವರನ್ನು ದೇಶದ್ರೋಹಿ ಎಂದು ಸಂಬೋಧಿಸಿ, ಗೋಡ್ಸೆಯನ್ನು ದೇಶಭಕ್ತ ಎಂದು ಕರೆಯುತ್ತಿರುವುದು’ ಖಂಡನೀಯ ಎಂದು ತಿಳಿಸಿದ್ದಾರೆ.