ಮಹ್ಮದ್ ರಶೀದ್ ಟವರ್ ಏರಿ ಪ್ರತಿಭಟನೆ ನಡೆಸಿದ ಕಾರ್ಮಿಕ. ಕಾರ್ಖಾನೆಯ ನಿಯಮದ ಪ್ರಕಾರ ದೀಪಾವಳಿಗೊಮ್ಮ ಕಾರ್ಮಿಕರಿಗೆ ಬೋನಸ್ ನೀಡಬೇಕು. ಆದರೆ ಈ ವರ್ಷ ಬೋನಸ್ ನೀಡಿಲ್ಲವೆಂದು ಟವರ್ ಏರಿ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೆ ಬೋನಸ್ ನೀಡುವವರೆಗೂ ಕೆಳಗೆ ಇಳಿಯುವುದಿಲ್ಲವೆಂದು ಎಂದ ಹಠ ಹಿಡಿದಿದ್ದರು ಎನ್ನಲಾಗಿದೆ. ಕಾರ್ಖಾನೆಯ ಅಧಿಕಾರಿಗಳು ತಿಳಿಹೇಳಿ ಕೆಳಗಿಳಿಸಿರುವುದು ತಿಳಿದುಬಂದಿದೆ.