ತಾಲ್ಲೂಕಿನಲ್ಲಿ ಸದ್ಯ ಮುಂಗಾರು ಬಿತ್ತನೆ ಶೇ 60ರಷ್ಟು ಪೂರ್ಣವಾಗಿದೆ. ಮುಂಗಾರು ಬಿತ್ತನೆಗೆ ಸಿದ್ಧವಾಗಿದ್ದ ರೈತರಿಗೆ ಮಿರ್ಗಾ ಮಳೆ ಕೃಪೆ ತೋರಿದೆ. ತಾಲ್ಲೂಕಿನ ಐನಾಪುರ, ಕುಂಚಾವರಂ,ಸುಲೇಪೇಟ ಸುತ್ತಲೂ ಬಿತ್ತನೆ ಹೆಚ್ಚಿನ ಪ್ರಮಾಣದಲ್ಲಿ ನಡೆದಿದೆ. ಚಿಂಚೋಳಿ ಸುತ್ತಮುತ್ತ ಬಿತ್ತನೆ ಈಗ ಆರಂಭವಾಗಿದೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಅನಿಲ ರಾಠೋಡ್ ತಿಳಿಸಿದರು.