ಕರ್ನಾಟಕ ರಾಜ್ಯರೈತ ಸಂಘದ ರಾಜ್ಯ ಉಪಾಧ್ಯಕ್ಷರಾಗಿದ್ದ ಬಸವರಡ್ಡಿ ಅವರು ಪ್ರೊ. ನಂಜುಂಡಸ್ವಾಮಿ ಅವರ ಒಡನಾಡಿಯಾಗಿದ್ದರು. ಮೂರೂವರೆ ದಶಕಗಳಿಂದ ರೈತರಪರವಾದ ಹೋರಾಟಗಳನ್ನು ನಡೆಸಿಕೊಂಡು ಬಂದಿದ್ದರು. ಕಲಬುರ್ಗಿ, ಯಾದಗರಿ, ಬೀದರ್, ರಾಯಚೂರು, ವಿಜಯಪುರ, ಬೆಳಗಾವಿ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸುತ್ತಾಡಿ ರೈತ ಸಂಘವನ್ನು ಕಟ್ಟಿದ್ದರು. ತೊಗರಿ ಬೆಂಬಲ ಬೆಲೆಗಾಗಿ ಮಾರುತಿ ಮಾನ್ಪಡೆ ಅವರ ಜತೆಗೂಡಿ ಬೃಹತ್ ಹೋರಾಟ ನಡೆಸಿದ್ದರು. ತೊಗರಿ ಮಂಡಳಿ ಸ್ಥಾಪನೆಗಾಗಿ, ಕಬ್ಬರು ಬೆಳೆಗಾರರ ಸಮಸ್ಯೆ ಸೇರಿದಂತೆ ಪಂಪ್ಸೆಟ್ಗಳಿಗೆ ಮೀಟರ್ ಅಳವಡಿಕೆ ವಿರುದ್ಧ ಸಹ ಬೃಹತ್ ಹೋರಾಟ ನಡೆಸಿದ್ದರು.