ಚಿಂಚೋಳಿ (ಕಲಬುರ್ಗಿ ಜಿಲ್ಲೆ): ತಾಲ್ಲೂಕಿನ ಹೇಮ್ಲಾನಾಯಕ ತಾಂಡಾದಲ್ಲಿ ವಿದ್ಯುತ್ ತಗುಲಿ ತಂದೆ ಮೃತಪಟ್ಟರೆ, ಮಗ ಗಾಯಗೊಂಡಿರುವ ಘಟನೆ ಭಾನುವಾರ ಬೆಳಿಗ್ಗೆ ನಡೆದಿದೆ.
ಅರವಿಂದ ಮಾಣಿಕ ಜಾಧವ (28) ಮೃತ ದುರ್ದೈವಿ. ಮಗ ಅಭಿಷೇಕ (3) ಗಾಯಗೊಂಡಿದ್ದು, ಚಿಟಗುಪ್ಪ ಸಮುದಾಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹಬ್ಬದ ಅಂಗವಾಗಿ ಮನೆಯಲ್ಲಿ ಬಟ್ಟೆ ಬರೆ ತೊಳೆದು ಪಕ್ಕದ ಮನೆಯ ಮಾಳಿಗೆಯ ಮೇಲೆ ಒಣಗಿಸಲು ಹಾಕುವಾಗ ದುರ್ಘಟನೆ ಸಂಭವಿಸಿದೆ.