‘ಬಿಳವಾರ ಗ್ರಾಮದ ಮುಖಂಡರಾದ ಹೊನ್ನಪ್ಪ ಕೊಡಮನಹಳ್ಳಿ, ರಾಮನಗೌಡ ನಾಗರಳ್ಳಿ, ಮಡಿವಾಳಪ್ಪ ಪಡಶೆಟ್ಟಿ, ಮಲ್ಲನಗೌಡ ಕೋಡಮನಹಳ್ಳಿ, ಗೌಡಪ್ಪ ಬೊಮ್ಮನಹಳ್ಳಿ, ಬಸಪ್ಪಗೌಡ ನವಣಿ ಇವರು ಚುನಾವಣೆ ನಡೆಯದಂತೆ ಪ್ರಜಾ ಪ್ರತಿನಿಧಿ ಕಾಯ್ದೆ ಉಲ್ಲಂಘನೆ ಮಾಡಿ ಹರಾಜು ಪ್ರಕ್ರಿಯೆ ನಡೆಸಿದ್ದರು.ಗೊಲ್ಲಾಳಪ್ಪ ಮ್ಯಾಗೇರಿ, ಹಣಮಂತ ಭೋವಿ, ಹಣಮಂತರಾಯ ದೊರೆ ಹಾಗೂ ಬಬ್ರುವಾಹನ ಭೋವಿ ಇವರು ಈ ಸ್ಥಾನಗಳಿಗೆ ಆಯ್ಕೆಯಾಗಲು ಒಟ್ಟಾರೆ₹ 26.55 ಲಕ್ಷ ನೀಡಲು ನಿರ್ಧರಿಸಿದ್ದರು.ಹೀಗಾಗಿ ಇವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ’ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ತಿಳಿಸಿದ್ದಾರೆ.