‘ಬ್ಯಾಂಕ್ನ ಹಿಂಬದಿಯ ಕಟ್ಟಡದಲ್ಲಿ ಜನರೇಟರ್ ಇದ್ದು, ಅದರಿಂದ ಹೊಗೆಯ ವಾಸನೆ ಬರತೊಡಗಿದೆ. ಅದನ್ನು ಗಮನಿಸಿದ ಕಟ್ಟಡದ ಎದುರಿಗೆ ಮಣ್ಣಿನ ಪಾತ್ರೆಗಳನ್ನು ಮಾರುತ್ತಿದ್ದ ವ್ಯಾಪಾರಿ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಸಿಬ್ಬಂದಿ ಬೆಂಕಿ ನಂದಿಸುವ ವೇಳೆ ವಿದ್ಯುತ್ ತಗುಲಿ ಹೊರಗೆ ಬಿದ್ದಿದ್ದಾರೆ. ಅವರನ್ನು ತಕ್ಷಣವೇ ಸಂಚಾರ ಠಾಣೆಯ ಪೊಲೀಸರು ಆಟೊದಲ್ಲಿ ಜಯದೇವ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟರು’ ಎಂದು ಪೊಲೀಸರು ತಿಳಿಸಿದ್ದಾರೆ.