ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

40 ಲೀಟರ್ ಕಲಬೆರಕೆ ಸೇಂದಿ ಜಪ್ತಿ, ಬಂಧನ

Last Updated 27 ಸೆಪ್ಟೆಂಬರ್ 2022, 14:53 IST
ಅಕ್ಷರ ಗಾತ್ರ

ಕಲಬುರಗಿ: ಅಬಕಾರಿ ಇಲಾಖೆ ಅಧಿಕಾರಿಗಳು ನಗರದ ಹುಮನಾಬಾದ್ ಬೇಸ್ ಬಳಿಯ ದುರ್ಗಮ್ಮನ ಗುಡಿಯ ಬಳಿ ಸ್ಕೂಟರ್‌ನಲ್ಲಿ 40 ಲೀಟರ್ ಕಲಬೆರಕೆ ಸೇಂದಿ ಹಾಗೂ ಸೇಂದಿ ತಯಾರಿಸುವ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಆಳಂದ ಕಾಲೊನಿ ನಿವಾಸಿ ಪ್ರಕಾಶ ದೇವಪ್ಪ ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸ್ಕೂಟರ್ ವಶಪಡಿಸಿಕೊಳ್ಳಲಾಗಿದೆ.

ಕಾರ್ಯಾಚರಣೆಯಲ್ಲಿ ಕಲಬುರಗಿ ವಲಯ–2ರ ಅಬಕಾರಿ ಉಪನಿರೀಕ್ಷಕ ನರೇಂದ್ರಕುಮಾರ್ ಹೊಸಮನಿ, ಅಬಕಾರಿ ನಿರೀಕ್ಷಕ ಸುಭಾಷ್ ಕೋಟಿ, ಸಿಬ್ಬಂದಿಯಾದ ಆಸಿಫ್ ಇಕ್ಬಾಲ್, ಚನ್ನಪ್ಪ ಸಾಹು, ರಿಜ್ವಾನ್, ಚಂದ್ರಶೇಖರ, ಸಂತೋಷ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT