ಕಲಬುರಗಿ: ಅಬಕಾರಿ ಇಲಾಖೆ ಅಧಿಕಾರಿಗಳು ನಗರದ ಹುಮನಾಬಾದ್ ಬೇಸ್ ಬಳಿಯ ದುರ್ಗಮ್ಮನ ಗುಡಿಯ ಬಳಿ ಸ್ಕೂಟರ್ನಲ್ಲಿ 40 ಲೀಟರ್ ಕಲಬೆರಕೆ ಸೇಂದಿ ಹಾಗೂ ಸೇಂದಿ ತಯಾರಿಸುವ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆಳಂದ ಕಾಲೊನಿ ನಿವಾಸಿ ಪ್ರಕಾಶ ದೇವಪ್ಪ ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸ್ಕೂಟರ್ ವಶಪಡಿಸಿಕೊಳ್ಳಲಾಗಿದೆ.