ಘಟನೆ ಕುರಿತು ಮಾಹಿತಿ ನೀಡಿದ ವಾನತಿ, ‘ಮುಳ್ಳು ಹಂದಿಯನ್ನು ವನ್ಯಜೀವಿ ಸಂರಕ್ಷಣಾ ಕಾಯ್ದೆ ಉಪನಿಯಮ 4ರ ಪ್ರಕಾರ ಸಂರಕ್ಷಿತ ಪ್ರಾಣಿ ಎಂದು ಗುರುತಿಸಲಾಗಿದೆ. ಹೀಗಾಗಿ, ಅಧಿಕಾರಿಗಳ ಸೂಚನೆಯಂತೆ ಯುವಕನನ್ನು ವಶಕ್ಕೆ ಪಡೆದಿದ್ದೇವೆ. ಮಂಜುನಾಥನನ್ನು ವಿಜಯಪುರ ಅರಣ್ಯ ಅಧಿಕಾರಿಗಳ ವಶಕ್ಕೆ ಒಪ್ಪಿಸಲಾಗುವುದು’ ಎಂದರು.