ಮಧ್ಯಾಹ್ನ 1.55ರಿಂದ 2.05ರ ಮಧ್ಯೆ ಮೂರು ಬಾರಿ ಹಾಗೂ 2.39ಕ್ಕೆ ಒಮ್ಮೆ ಭೂಮಿಯಿಂದ ಶಬ್ದ ಕೇಳಿ ಬಂದಿದೆ. ಇದರಿಂದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ದಟ್ಟ ಮೋಡ ಹಾಗೂ ಮಳೆಯ ಸಿಂಚನ ಹೊರಗಡೆ ಕಾಣಿಸಿದರೆ ಕಂಪನದಿಂದ ಬಿರುಕು ಬಿಟ್ಟ ಕಲ್ಲು ಮಣ್ಣಿನ ಗೋಡೆಯ ಮನೆಯ ಒಳಗಡೆ ಹೋಗಲು ಹಿಂಜರಿಯುತ್ತಿದ್ದಾರೆ. ಬಹುತೇಕರು ತಾಡಪಾಲುಗಳಿಂದ ಶೆಡ್ ನಿರ್ಮಿಸಿಕೊಂಡಿದ್ದಾರೆ. ಇನ್ನು ಕೆಲವರು ರಸ್ತೆ ಬದಿ ಕಟ್ಟೆಗಳಲ್ಲಿ ಕುಳಿತು ಕಾಲ ಕಳೆಯುವಂತಾಗಿದೆ. ಬಹುತೇಕರು ಭೂಕಂಪಕ್ಕೆ ಹೆದರಿ ಹೊಲಗಳಿಗೆ ತೆರಳುತ್ತಿದ್ದಾರೆ ಆದರೆ ಮಕ್ಕಳು, ವೃದ್ಧರು, ಅಂಗವಿಕಕರು ಭಯದಲ್ಲಿಯೇ ಕಾಲಕಳೆಯುವಂತಾಗಿದೆ ಎಂದು ರೈತ ಮುಖಂಡ ಸಂತೋಷ ಬಳಿ ತಿಳಿಸಿದರು.