ತಿರುವಿನಲ್ಲಿ ಮೂರು ಸರಣಿ ರೋಡ್ ಬ್ರೇಕ್ಗಳಿದ್ದು, ಬಲಭಾಗದಲ್ಲಿ ಸಪಾಟಾದ ನೆಲವಿದೆ. ಹೀಗಾಗಿ, ರೋಡ್ ಬ್ರೇಕ್ ತಪ್ಪಿಸಲು ಕಾರು ಎಡಬದಿಯಿಂದ ಬಲಬದಿಗೆ ಬಂದಾಗ ಎದುರಿಗೆ ವೇಗವಾಗಿ ಲಾರಿ ಡಿಕ್ಕಿ ಹೊಡೆಯಿತು. ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರಿನ ಸೀಟುಗಳು ಕಿತ್ತು ಹಿಂದಕ್ಕೆ ಬಿದ್ದಿದ್ದವು. ಮೃತದೇಹಗಳು ಕಾರಿನಲ್ಲೇ ಇದ್ದವು. ಬೂಟುಗಳು, ಕಾರಿನ ಗಾಜು ಒಡೆದು ರಸ್ತೆಯ ಮೇಲೆ ಬಿದ್ದಿದ್ದವು. ರಾತ್ರಿ ಸ್ಥಳಕ್ಕೆ ಧಾವಿಸಿದ ಸಂಚಾರ ಠಾಣೆಯ ಪೊಲೀಸರು ಕಾರು ಹಾಗೂ ಲಾರಿಗಳನ್ನು ಅಲ್ಲಿಂದ ತೆರವುಗೊಳಿಸಿ ಬೇರೆಡೆ ನಿಲ್ಲಿಸಿದರು. ಸ್ಥಳಕ್ಕೆ ಕಲಬುರ್ಗಿ ಪೊಲೀಸ್ ಕಮಿಷನರ್ ಡಾ.ವೈ.ಎಸ್.ರವಿಕುಮಾರ್, ಡಿಸಿಪಿ ಅಡ್ಡೂರು ಶ್ರೀನಿವಾಸಲು, ಎಸಿಪಿ (ಸಂಚಾರ) ಸುಧಾ ಆದಿ, ಸಂಚಾರ ಠಾಣೆ –2ರ ಪೊಲೀಸ್ ಇನ್ಸ್ಪೆಕ್ಟರ್ ಅಮರೇಶ ಭೇಟಿ ನೀಡಿ ಪರಿಶೀಲನೆ ನಡೆಸಿದರು.