ಟೆಂಟ್ ಇಲ್ಲ, ಸಂಗೀತದ ಸದ್ದೂ ಇಲ್ಲ: ಗಣಪತಿಗಳನ್ನು ಪ್ರತಿ ವರ್ಷ ಅದ್ಧೂರಿ ಪೆಂಡಾಲ್ ಹಾಕಿ, ರಸ್ತೆ ಬಂದ್ ಮಾಡಿ, ಇಡೀ ದಿನ ಸಂಗೀತ ಹಾಕಿ 5 ದಿನ, 9 ದಿನ ಹಾಗೂ 11 ದಿನಗಳವರೆಗೆ ಪ್ರತಿಷ್ಠಾಪನೆ ಮಾಡಲಾಗುತ್ತಿತ್ತು. ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿತ್ತು. ಈ ಬಾರಿ ಅದಕ್ಕೆ ಅವಕಾಶ ನೀಡಿಲ್ಲ. ಹೀಗಾಗಿ, ಹೆಚ್ಚೆಂದರೆ ನಗರದಲ್ಲಿ ಸುಮಾರು 50 ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿರಬಹುದು ಎನ್ನುತ್ತಾರೆ ಲಾಲಗೇರಿ ನಿವಾಸಿ ಜಯತೀರ್ಥ ದೇಸಾಯಿ.