ಬೆಡ್ ಪಡೆಯುವುದು ಸುಲಭವಿಲ್ಲ: ‘ತೀವ್ರ ಉಸಿರಾಟದ ಸಮಸ್ಯೆ (ಸಾರಿ) ಇರುವ ರೋಗಿಗಳ ಸಂಖ್ಯೆ ಹೆಚ್ಚುತ್ತಲೇ ಇದ್ದು, ಅಂಥವರಿಗೆ ಬೆಡ್ ಸಿಗಬೇಕೆಂದರೆ ಪ್ರಭಾವಿಗಳಿಂದ ಹೇಳಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು, ಮಾಜಿ ಸಚಿವರು, ಜಿಲ್ಲಾ ಮಟ್ಟದ ಅಧಿಕಾರಿಗಳು ತಮ್ಮ ಪರಿಚಯಸ್ಥರಿಗೆ ಬೆಡ್ ಇದೆಯೇ ಎಂದು ವಿಚಾರಿಸುತ್ತಿದ್ದಾರೆ. ಇದ್ದ ಬೆಡ್ಗಳಲ್ಲೇ ನಿಭಾಯಿಸಬೇಕಾಗಿದೆ. 10 ಜನ ಗುಣಮುಖರಾಗಿ ಹೊರಹೋದರೆ 15 ಜನರು ಆಡ್ಮಿಟ್ ಆಗಲು ಕಾಯುತ್ತಿರುತ್ತಾರೆ. ಇಂತಹ ಸನ್ನಿವೇಶವನ್ನು ನನ್ನ 30 ವರ್ಷಗಳ ವೃತ್ತಿ ಜೀವನದಲ್ಲಿ ಕಂಡಿರಲಿಲ್ಲ’ ಎಂದು ಅವರು ಪರಿಸ್ಥಿತಿಯ ಗಂಭೀರತೆಯನ್ನು ಬಿಚ್ಚಿಟ್ಟರು.