ಭೀಮಾಶಂಕರ ಹಕ್ಕಿ, ಇವರ ಸಹೋದರರಾದ ರಾಕೇಶ ಹಕ್ಕಿ, ಕಲ್ಯಾಣಿ ಹಕ್ಕಿ, ಭೀಮಾಶಂಕರ ತಂದೆ ದಶರಥ ಹಕ್ಕಿ, ತಾಯಿ ಶಿವಲಿಂಗಮ್ಮ ಹಕ್ಕಿ ಬಂಧಿತರು. ‘ಪ್ರಮುಖ ಆರೋಪಿ ಭೀಮಾಶಂಕರ ಬಾಲಕಿಯನ್ನು ಎರಡು ವರ್ಷದಿಂದ ಚುಡಾಯಿಸುತ್ತಿದ್ದ. ಅವಳನ್ನು ತನ್ನ ಜತೆ ಮದುವೆ ಮಾಡಿಕೊಡದಿದ್ದರೆ ಬಲವಂತವಾಗಿ ಓಡಿಸಿಕೊಂಡು ಹೋಗಿ ಮದುವೆ ಆಗುವುದಾಗಿ ಬೆದರಿಕೆ ಹಾಕಿದ್ದ. ಆತನ ಸಹೋದರರು ಮತ್ತೆ ತಂದೆ-ತಾಯಿ ಕೃತ್ಯಕ್ಕೆ ಸಹಕಾರ ನೀಡಿದ್ದಾರೆ. ಹೀಗಾಗಿ ಐದೂ ಜನರನ್ನು ಬಂಧಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಶಶಿಕುಮಾರ್ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.