<p class="rtejustify"><strong>ಕಲಬುರ್ಗಿ:</strong> ನಗರ ಸೇರಿದಂತೆ ಚಿಂಚೋಳಿ, ಶಹಾಬಾದ್, ಯಡ್ರಾಮಿ ತಾಲ್ಲೂಕಿನಲ್ಲಿ ಬೆಳಿಗ್ಗೆಯಿಂದಲೇ ಉತ್ತಮ ಮಳೆ ಸುರಿಯುತ್ತಿದೆ.</p>.<p class="rtejustify">ರಾತ್ರಿಯಿಂದಲೇ ಮೋಡ ಕವಿದ ವಾತಾವರಣ ಇತ್ತು. ಮಳೆಯಿಂದಾಗಿ ನಗರದ ಸ್ವರೂಪವೇ ಬದಲಾಗಿದ್ದು, ಮಲೆನಾಡನ್ನು ನೆನಪಿಸುತ್ತಿದೆ.</p>.<p class="rtejustify">ಮಳೆಯ ಜೊತೆಗೆ ಭಾನುವಾರ ಇರುವುದರಿಂದ ನಗರದಲ್ಲಿ ಜನಸಂಚಾರ ವಿರಳವಾಗಿದ್ದು, ಸಾರಿಗೆ ಸಂಸ್ಥೆಯ ಬಸ್ ಗಳಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆ ಇದೆ.</p>.<p class="rtejustify">ಮಹಾರಾಷ್ಟ್ರದಲ್ಲಿ ಮಳೆಯಾಗುತ್ತಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಭೀಮಾ ನದಿ ತೀರದ ಜನರು ಎಚ್ಚರ ವಹಿಸುವಂತೆ ನೀರಾವರಿ ನಿಗಮದ ಅಧಿಕಾರಿಗಳು ಜನರಿಗೆ ಮನವಿ ಮಾಡಿದ್ದಾರೆ.</p>.<p class="rtejustify">ಅಫಜಲಪುರ ಬಳಿ ಇರುವ ಸೊನ್ನ ಭೀಮಾ ಬ್ಯಾರೇಜಿಗೆ ಜಿಲ್ಲಾ ಪಂಚಾಯಿತಿ ಸಿಇಓ ಡಾ.ದಿಲೀಷ್ ಶಶಿ ಶನಿವಾರ ಭೇಟಿ ನೀಡಿ ನೀರಿನ ಮಟ್ಟ ಏರಿಕೆ ಕುರಿತು ಎಂಜಿನಿಯರ್ ಗಳೊಂದಿಗೆ ಚರ್ಚಿಸಿದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p class="rtejustify"><strong>ಕಲಬುರ್ಗಿ:</strong> ನಗರ ಸೇರಿದಂತೆ ಚಿಂಚೋಳಿ, ಶಹಾಬಾದ್, ಯಡ್ರಾಮಿ ತಾಲ್ಲೂಕಿನಲ್ಲಿ ಬೆಳಿಗ್ಗೆಯಿಂದಲೇ ಉತ್ತಮ ಮಳೆ ಸುರಿಯುತ್ತಿದೆ.</p>.<p class="rtejustify">ರಾತ್ರಿಯಿಂದಲೇ ಮೋಡ ಕವಿದ ವಾತಾವರಣ ಇತ್ತು. ಮಳೆಯಿಂದಾಗಿ ನಗರದ ಸ್ವರೂಪವೇ ಬದಲಾಗಿದ್ದು, ಮಲೆನಾಡನ್ನು ನೆನಪಿಸುತ್ತಿದೆ.</p>.<p class="rtejustify">ಮಳೆಯ ಜೊತೆಗೆ ಭಾನುವಾರ ಇರುವುದರಿಂದ ನಗರದಲ್ಲಿ ಜನಸಂಚಾರ ವಿರಳವಾಗಿದ್ದು, ಸಾರಿಗೆ ಸಂಸ್ಥೆಯ ಬಸ್ ಗಳಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆ ಇದೆ.</p>.<p class="rtejustify">ಮಹಾರಾಷ್ಟ್ರದಲ್ಲಿ ಮಳೆಯಾಗುತ್ತಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಭೀಮಾ ನದಿ ತೀರದ ಜನರು ಎಚ್ಚರ ವಹಿಸುವಂತೆ ನೀರಾವರಿ ನಿಗಮದ ಅಧಿಕಾರಿಗಳು ಜನರಿಗೆ ಮನವಿ ಮಾಡಿದ್ದಾರೆ.</p>.<p class="rtejustify">ಅಫಜಲಪುರ ಬಳಿ ಇರುವ ಸೊನ್ನ ಭೀಮಾ ಬ್ಯಾರೇಜಿಗೆ ಜಿಲ್ಲಾ ಪಂಚಾಯಿತಿ ಸಿಇಓ ಡಾ.ದಿಲೀಷ್ ಶಶಿ ಶನಿವಾರ ಭೇಟಿ ನೀಡಿ ನೀರಿನ ಮಟ್ಟ ಏರಿಕೆ ಕುರಿತು ಎಂಜಿನಿಯರ್ ಗಳೊಂದಿಗೆ ಚರ್ಚಿಸಿದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>