ಆಗ ಅಭ್ಯರ್ಥಿ ಚುನಾವಣಾಧಿಕಾರಿಗೆ ತಿಳಿಸಿದ್ದಾರೆ. ಅಷ್ಟಕ್ಕೆ ಚುನಾವಣೆ ಸ್ಥಗಿತ ಗೊಳಿಸಲಾಗಿದೆ. ಈ ವಾರ್ಡ್ ನಲ್ಲಿ 2 ಸ್ಥಾನಗಳಿದ್ದು, 8 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಅಂಬಾರಾಯ ಶಿವರುದ್ರಪ್ಪ ಆಟೊ, ಕಲ್ಯಾಣರಾವ ಚಿತಾನಂದ ಟ್ರ್ಯಾಕ್ಟರ್, ಕಸ್ತೂರಿಬಾಯಿ ಸಾಯಬಣ್ಣ ಚಹಾ ಕಿಟ್ಲಿ, ಚನ್ನಮ್ಮ ದೇವಿಂದ್ರ ಬ್ಯಾಟರಿ (ಟಾರ್ಚ್), ಪ್ರಸಾದ ಶ್ರೀಮಂತ ಬಕೆಟ್, ಪುತಳಾಬಾಯಿ ಪಾಂಡಪ್ಪ ತೆಂಗಿನ ತೋಟ, ಹಾಗೂ ನಾಲ್ಕನೇ ಕ್ರಮ ಸಂಖ್ಯೆಯಲ್ಲಿರುವ ಗಜಾನಂದ ಅವರಿಗೆ ಹಲ್ಲುಜ್ಜುವ ಪೇಸ್ಟ್ ಚಿಹ್ನೆ ನೀಡಲಾಗಿತ್ತು. ಆದರೆ ಮತ ಪತ್ರದಲ್ಲಿ ಹಲ್ಲುಜ್ಜುವ ಬ್ರಶ್ ಮುದ್ರಣಗೊಂಡಿದೆ.