ಇದಕ್ಕೂ ಮುನ್ನ ವಿಶ್ವವಿದ್ಯಾಲಯದಿಂದ ಸೇವಾ ನಿವೃತ್ತಿ ಹೊಂದಿದ ಕನ್ನಡ ಅಧ್ಯಯನ ಸಂಸ್ಥೆಯ ಮುಖ್ಯಸ್ಥೆಯಾಗಿದ್ದ ಡಾ.ಜಯಶ್ರೀ ದಂಡೆ ಸೇರಿದಂತೆ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ವಿದೇಶಗಳಲ್ಲಿ ಪ್ರಬಂಧ ಮಂಡಿಸಿದ ಹಾಗೂ ಸಂಶೋಧನೆಯಲ್ಲಿ ಸಾಧನೆ ಮಾಡಿದ ಡಾ.ಎಸ್.ಎನ್.ಗಾಯಕವಾಡ, ಡಾ.ಜಿ.ಎಂ.ವಿದ್ಯಾಸಾಗರ, ಡಾ.ದಯಾನಂದ ಅಗಸರ, ಡಾ.ಎಂ.ಬಿ.ಸುಲೋಚನಾ, ಡಾ.ಆನಂದ ನಾಯಕ, ಪ್ರೊ.ಜಿ.ಶ್ರೀರಾಮುಲು, ಪ್ರೊ.ವಿ.ಟಿ.ಕಾಂಬಳೆ, ಪ್ರೊ.ಎಚ್.ಟಿ.ಪೋತೆ, ಡಾ.ಹಣಮಂತ ಜಂಗೆ, ಡಾ.ಎಂ.ಎಸ್.ಪಾಸೋಡಿ, ಪ್ರೊ.ಅಮಲಪ್ಪ ಹೊಸಮನಿ, ಪ್ರೊ.ರಾಜನಾಳಕರ ಲಕ್ಷ್ಮಣ ಅವರನ್ನು ಸನ್ಮಾನಿಸಲಾಯಿತು.