ಕನ್ನಡದ ಲೇಖಕರು, ದಾರ್ಶನಿಕರು, ವಿಜ್ಞಾನಿಗಳು, ಮೇಧಾವಿಗಳು ಗಾಂಧೀಜಿ ಕುರಿತು ವ್ಯಕ್ತ ಪಡಿಸಿದ ಅಭಿಪ್ರಾಯಗಳನ್ನು ಕ್ರೋಢೀಕರಿಸಿ ಅವರ ವ್ಯಕ್ತಿತ್ವವನ್ನು ಕಟ್ಟಿಕೊಟ್ಟರು. ರಾಜಕೀಯವಾಗಿ ಯಾವುದೇ ಅಧಿಕಾರವಿಲ್ಲದ ಗಾಂಧಿ ಜಗತ್ತಿನ ಎಲ್ಲ ದೇಶಗಳ ಗೌರವಕ್ಕೆ ಪಾತ್ರವಾದ ಬಗೆಯನ್ನು ಭಾರತೀಯರೇ ಸರಿಯಾಗಿ ಅರ್ಥಮಾಡಿಕೊಳ್ಳಬೇಕಿದೆ. ಅವರ ಕುರಿತು ಎಷ್ಟೇ ವಿಮರ್ಶೆಗಳಿದ್ದರೂ ಅಂತಿಮವಾಗಿ ಅಹಿಂಸೆ, ಸ್ನೇಹಪರತೆ, ತನ್ನ ತಪ್ಪನ್ನು ತಿದ್ದಿಕೊಳ್ಳುವುದು, ಆತ್ಮಾವಲೋಕನ ಮಾಡಿಕೊಳ್ಳುವುದು, ಸ್ವಯಂ ಸೇವೆ ಅವರ ಪ್ರಧಾನ ಗುಣಗಳಾಗಿರುವುದನ್ನು ಯಾರೂ ಅಲ್ಲಗಳೆಯಲಾಗದು ಎಂದರು.