ಶಿಬಿರವು ಬೆಳಿಗ್ಗೆ 10 ರಿಂದ ಸಂಜೆ 5.30ರ ವರೆಗೆ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ ಪ್ರಧಾನ ಸಂಚಾಲಕತ್ವದಲ್ಲಿ ನಡೆಯಲಿದೆ. ಹಳಗನ್ನಡದ ಹಿರಿಯ ವಿದ್ವಾಂಸರಾದ ಪ್ರೊ.ತಾಳ್ತಜೆ ವಸಂತಕುಮಾರ, ಪ್ರೊ.ಎನ್.ಎಸ್.ತಾರಾನಾಥ, ಡಾ. ಎಸ್.ಕಾರ್ತಿಕ್, ಪ್ರೊ.ಶಾಂತಿನಾಥ ದಿಬ್ಬದ, ಡಾ. ಪಾದೇಕಲ್ಲು ವಿಷ್ಣುಭಟ್ಟ, ಡಾ. ಎಂ.ಆರ್.ಸತ್ಯನಾರಾಯಣ, ಪ್ರೊ.ವಿ.ಜಿ.ಪೂಜಾರ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ.