ಆಳಂದ, ಖಜೂರಿ ಹೋಬಳಿ ವಲಯದಲ್ಲಿ ಅತಿ ಹೆಚ್ಚು ಮಳೆ ಸುರಿದ ಪರಿಣಾಮ ಅಮರ್ಜಾ ಅಣೆಕಟ್ಟೆಯು ಸಂಪೂರ್ಣ ಭರ್ತಿಯಾಗಿದೆ. ಮುಂಜಾಗೃತಾ ಕ್ರಮವಾಗಿ ಅಣೆಕಟ್ಟೆಯ ನಾಲ್ಕು ಗೇಟ್ ತೆರೆದು ನೀರು ಬಿಡಲಾಗುತ್ತಿದೆ. ಕಿಣಿಸುಲ್ತಾನ್, ಸಾಲೇಗಾಂವ, ವೈಜಾಪುರ, ಕೆರೂರು ಗ್ರಾಮದ ಕೆರೆಗಳು ಭರ್ತಿಯಾಗಿವೆ. ತೊಗರಿ, ಕಬ್ಬು, ಸೋಯಾಬಿನ್, ಶೇಂಗಾ, ಸೂರ್ಯಕಾಂತಿ ಮತ್ತು ತೋಟಗಾರಿಕೆ ಬೆಳೆಯು ಜಲಾವೃತ್ತವಾಗಿದೆ. ವಿವಿಧ ಗ್ರಾಮದಲ್ಲಿ ರೈತರ ಬಾವಿ, ಬದುವು ಕೊಚ್ಚಿ ಹೋಗಿವೆ.