ಕಲಬುರ್ಗಿ: ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಬಾಚನಾಳ ಕೆರೆ ಭರ್ತಿಯಾಗಿ ಪಕ್ಕದ ಹೊಲಗಳಿಗೆ ನೀರು ನುಗ್ಗಿ ಅಪಾರ ಹಾನಿಯಾಗಿದೆ.
ಕಮಲಾಪುರ ತಾಲ್ಲೂಕಿನ ಸೊಂತ ಗ್ರಾಮದಲ್ಲಿ ಮನೆಯ ಗೋಡೆ ಕುಸಿದು ಮೂರು ಆಕಳುಗಳು ಸಾವನ್ನಪ್ಪಿವೆ.
ಕುದಮುಡ ಸೇತುವೆ ಕುಸಿದಿದೆ. ಗೊಬ್ಬರವಾಡಿಯಲ್ಲಿ ಹಳ್ಳ ತುಂಬಿ ಹೊಲಗಳಿಗೆ ಹರಿಯುತ್ತಿದೆ.
ಇತ್ತೀಚಿನ ದಿನಗಳಲ್ಲಿ ಸುರಿಯುತ್ತಿರುವ ಅತ್ಯಂತ ಬಿರುಸಿನ ಮಳೆ ಇದಾಗಿದೆ. ಕಲಬುರ್ಗಿಯಲ್ಲಿ ಬೆಳಿಗ್ಗೆಯಿಂದಲೇ ಮೋಡದ ಮುಸುಕು ಹೊದ್ದುಕೊಂಡಿದ್ದು, ಮಧ್ಯಾಹ್ನದ ಬಳಿಕ ನಿರಂತರವಾಗಿ ಮಳೆ ಸುರಿಯುತ್ತಿದೆ.