ನಗರ ಹಾಗೂ ತಾಲ್ಲೂಕಿನೆಲ್ಲೆಡೆ ಬುಧವಾರ ಮಧ್ಯಾಹ್ನಕ್ಕೆ ಆರಂಭವಾದ ಮಳೆ ಎಡೆಬಿಡದೇ ಸುರಿಯುತ್ತಿದೆ. ಜಿಲ್ಲೆಯ ಚಿಂಚೋಳಿ, ಚಿತ್ತಾಪುರ, ಜೇವರ್ಗಿ, ಕಾಳಗಿ, ಕಮಲಾಪುರ, ಸೇಡಂ, ಯಡ್ರಾಮಿ, ಅಫಜಲಪುರ ತಾಲ್ಲೂಕಿನ ಬಹುಪಾಲು ಕಡೆ ಮಳೆಯು ಕೃಷಿ ಕಾರ್ಯಕ್ಕೆ ಅಡ್ಡಿ ಮಾಡಿದೆ. ಹಲವು ಹೊಲಗಳಲ್ಲಿ ಹಾಕಿದ ಬೆಳೆ ಈಗಾಗಲೇ ಹಾಳಾಗಿದೆ. ನಿರಂತರ ಮಳೆಯಿಂದ ಹೊಲಗಳಲ್ಲಿ ನೀರು ನಿಂತಿದ್ದು ರೈತರನ್ನು ನಿದ್ದೆಗೆಡಿಸಿದೆ.