ನೀರಲ್ಲಿ ನಿಂತ ತೊಗರಿ: ಸಾವಳಗಿ, ಪಟ್ಟಣ, ಕೆರಿಬೋಸಗಾ, ಯಳವಂತಗಿ, ಹತಗುಂದಾ ಗ್ರಾಮದಲ್ಲಿ ಮಂಗಳವಾರ ಬೆಳಗಿನ ಜಾವ 2.30ರಿಂದ ಬೆಳಿಗ್ಗೆ 5ರವರೆಗೆ ಭಾರಿ ಮಳೆ ಸುರಿದಿದ್ದರಿಂದ ಬಿತ್ತನೆ ಮಾಡಿದ್ದ ತೊಗರಿ ಬೆಳೆ ಸಂಪೂರ್ಣವಾಗಿ ನೀರಿನಲ್ಲಿ ನಿಂತಿದೆ. ಪಟ್ಟಣದ ರೈತ ಗುಂಡೇರಾಯ ದೂಳಗೊಂಡ ಅವರ ಜಮೀನಿನಲ್ಲಿ ಬೆಳೆದಿರುವ ಚಿಕ್ಕು ಗಿಡಗಳು ಜಲಾವೃತವಾಗಿದ್ದವು. ಆಳಂದ ರಸ್ತೆಯ ಇಕ್ಕೆಲಗಳಲ್ಲಿಯೂ ನೀರು ನಿಂತಿತ್ತು.