ನಸುಕಿನ 2ಗಂಟೆ ಆವರಿಸಲು ಆರಂಭವಾಗಿ ಬೆಳಗಿನ ಜಾವ 5ರಿಂದ6 ಗಂಟೆ ಸಮಯದಲ್ಲಿ ದಟ್ಟ ಮಂಜು ಆವರಿಸಿದೆ. ಇದರಿಂದ ವಾಯು ವಿಹಾರಕ್ಕೆ ತೆರಳುವವರು, ಹಾಲು ತರಲು ಹೋಗುವವರು, ಪತ್ರಿಕೆ ಹಂಚುವವರು, ತಾಲ್ಲೂಕಿನ ವಿವಿಧ ಸಿಮೆಂಟ್ ಕಂಪೆನಿಗಳಿಗೆ ತೆರಳುವ ನೌಕರರು ತಮ್ಮ ವಾಹನಗಳಿಗೆ ಲೈಟ್ ಆನ್ ಮಾಡಿಕೊಂಡು ಹೋಗುವುದು ಅನಿವಾರ್ಯವಾಗಿತ್ತು.