ಕಲಬುರ್ಗಿ: ಇಲ್ಲಿನ ಹೈದರಾಬಾದ್ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಎಚ್ಕೆಸಿಸಿಐ)ಯ ಅಧ್ಯಕ್ಷರಾಗಿ ನಗರದ ಉದ್ಯಮಿ ಪ್ರಶಾಂತ ಮಾನಕರ ಗೆಲುವು ಸಾಧಿಸಿದ್ದಾರೆ. ಇವರು, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಭಾವ.
ಭಾನುವಾರ ನಗರದಲ್ಲಿ ಮತದಾನ ನಡೆದು, ತಡರಾತ್ರಿ ಫಲಿತಾಂಶ ಪ್ರಕಟವಾಯಿತು.
ಪ್ರಶಾಂತ (1,524 ಪಡೆದ ಮತ) ಅವರು ನಿಕಟಪೂರ್ವ ಅಧ್ಯಕ್ಷ ಅಮರನಾಥ ಸಿ. ಪಾಟೀಲ ಅವರನ್ನು 878 ಮತಗಳಿಂದ ಪರಾಭವಗೊಳಿಸಿದರು.
ಪ್ರಶಾಂತ ಅವರಬಣದ ಎಲ್ಲ 23 ಸ್ಪರ್ಧಿಗಳು ವಿಜೇತರಾಗಿದ್ದಾರೆ. ನೂತನ ಆಡಳಿತ ಮಂಡಳಿಯ ಅವಧಿ ಮೂರು ವರ್ಷ.