ಐಆರ್ಎಸ್ ಅಧಿಕಾರಿ ಲಕ್ಕಪ್ಪ ಹನುಮಣ್ಣವರ್ ಸೇರಿದಂತೆ ಒಟ್ಟು 8 ಜನ ಅಧಿಕಾರಿಗಳ ತಂಡ ತಾಲ್ಲೂಕಿನ ಕಲ್ಲೂರು ರೋಡ್ ಗ್ರಾಮದ ಬಳಿಯ ಚೆಟ್ಟಿನಾಡ್ ಸಿಮೆಂಟ್ ಕಂಪನಿಯ ಮೇಲೆ ದಾಳಿ ನಡೆಸಿದೆ ಎಂದು ಮೂಲಗಳು ತಿಳಿಸಿವೆ. ಇದನ್ನು ಕಂಪನಿಯ ಮೂಲಗಳು ಖಚಿತ ಪಡಿಸಿದ್ದು, ಅಧಿಕಾರಿಗಳು ಸರ್ವರ್ ಬಂದ್ ಮಾಡಿ ಶೋಧ ನಡೆಸಿದ್ದಾರೆ. ಕಂಪನಿಯ ಆಡಳಿತ ಶಾಖೆ ಮತ್ತು ಉತ್ಪಾದಿತ ಸಿಮೆಂಟ್ ಹೊರ ಹೋಗದಂತೆ ಬ್ಲಾಕ್ ಮಾಡಲಾಗಿದೆ.