ಕಲಬುರಗಿ: ಬಂಧನಕ್ಕೆ ತೆರಳಿದ್ದ ವೇಳೆ ಪೊಲೀಸರ ಮೇಲೆ ಹಲ್ಲೆ ಮಾಡಿ, ಗಾಯಗೊಳಿಸಿದ್ದ ಪ್ರಕರಣ ಇಬ್ಬರು ಅಪರಾಧಿಗಳಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲಾಗಿದೆ.
2017ರ ಅ.10ರ 8ರಂದು ಬಂಧನಕ್ಕೆ ತೆರಳಿದ್ದ ಅಶೋಕ ನಗರ ಹಾಗೂ ರಾಘವೇಂದ್ರ ನಗರ ಪೊಲೀಸ್ ಠಾಣೆಯ ಕೆಲವು ಸಿಬ್ಬಂದಿ ಮೇಲೆ ಶಿವಕುಮಾರ ರಾಜು ಹೈಬತಿ ಹಾಗೂ ಚೇತನ ಚಂದ್ರಕಾಂತ ಹೈಬತಿ ಅವರು ಹಲ್ಲೆ ಮಾಡಿದ್ದರು. ಘಟನೆಯಲ್ಲಿ ಕೆಲ ಪೊಲೀಸರು ಗಾಯಗೊಂಡಿದ್ದರು.
ಇಲ್ಲಿನ 1ನೇ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಮರುಳಸಿದ್ದಾರಾಧ್ಯ ಎಚ್.ಜೆ ಅವರು ಪ್ರಕರಣದ ವಿಚಾರಣೆ ನಡೆಸಿ, ದೋಷಿತರಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದ್ದಾರೆ. ಸರ್ಕಾರಿ ಅಭಿಯೋಜಕ ಎಸ್ಆರ್ ನರಸಿಂಹಲು ಅವರು ವಾದ ಮಂಡಿಸಿದ್ದರು.
ದೋಷಿಗಳಾದ ಶಿವಕುಮಾರಗೆ ವಿವಿಧ ಸೆಕ್ಷನ್ಗಳಡಿ 6 ವರ್ಷ ಜೈಲು ಶಿಕ್ಷೆ ಮತ್ತು ₹22 ಸಾವಿರ ದಂಡ ಹಾಗೂ ಚೇತನಗೆ 3 ವರ್ಷ ಜೈಲು ಹಾಗೂ ₹7 ಸಾವಿರ ದಂಡ ಹಾಕಿ, ಶಿಕ್ಷೆ ಪ್ರಕಟಿಸಲಾಗಿದೆ.