‘ಮುಂಗಾರು ಮಳೆಯಿಂದ ಅಲ್ಪಾವಧಿ ಬೆಳೆಗಳಾದ ಉದ್ದು, ಹೆಸರು, ಮೆಕ್ಕೆಜೋಳ, ಎಳ್ಳು, ಸಜ್ಜೆ ನೀರು ಪಾಲಾಗಿವೆ. ಅತಿವೃಷ್ಟಿಯಿಂದ ತಾಲ್ಲೂಕಿನ ಪ್ರಮುಖ ಮುಂಗಾರು ಬೆಳೆಗಳಾದ ಹತ್ತಿ, ತೊಗರಿ ಹೂ ಮತ್ತು ಕಾಯಿ ಕಟ್ಟುವ ಹಂತದಲ್ಲಿ ಶೇ 15ರಷ್ಟು ಬೆಳೆಗಳು ನೆಲಕ್ಕೆ ಬೀಳುತ್ತಿವೆ. ಇದರಿಂದ ಇಳುವರಿ ಕಡಿಮೆಯಾಗಲಿದೆ’ ಎಂದು ನರಿಬೋಳ ಗ್ರಾಮದ ರೈತ ನಾಗಣ್ಣ ಗಡ್ಡದ ತಿಳಿಸಿದ್ದಾರೆ.