‘ಪ್ರತಿ ಸಲ ಪ್ರವಾಹ ನಮ್ಮ ಬದುಕನ್ನು ಮುಕ್ಕುತ್ತಿದೆ. ಭಯ, ಆತಂಕದ ಮಧ್ಯೆ ಜೀವನ ನಡೆಸುವಂತಾಗಿದೆ. ನಾವು ಹೇಗೋ ಬದುಕಿದೆವು, ಈ ಕಷ್ಟ ನಮ್ಮ ಮಕ್ಕಳಿಗೆ ಬೇಡ, ನಮಗೆ ಸರ್ಕಾರ ನೀಡುವ ಊಟ ತಿಂಡಿ ಬೇಡ, ಪರಿಹಾರದ ಆಸೆಯೂ ನಮಗಿಲ್ಲ, ಹೊರಗಡೆ ಜಾಗದಲ್ಲಿ ಮನೆ ಕಟ್ಟಿಕೊಟ್ಟರೆ ನೆಮ್ಮದಿಯಾಗಿ ಬದುಕು ನಡೆಸ್ತೀವಿ' ಎಂದು ‘ಪ್ರಜಾವಾಣಿ’ಯೆದುರು ಶರಣಮ್ಮ, ಅನಸಾದೇವಿ, ರಿಯಾನ ಬೇಗಂ, ಆಬೇದ ಬೇಗಂ, ಸೋಮಯ್ಯಾ ಸ್ವಾಮಿ ಅಳಲು ತೋಡಿಕೊಂಡರು.