<p>ಆಳಂದ: ತಾಲ್ಲೂಕಿನ ಕಡಗಂಚಿ ಗ್ರಾಮದ ಆರಾಧ್ಯದೈವ ಶಾಂತಲಿಂಗೇಶ್ವರ ದೇವರ 396ನೇ ಜಾತ್ರೆ ಅಂಗವಾಗಿ ಬುಧವಾರ ರಥೋತ್ಸವ ಸಂಭ್ರಮದಿಂದ ಜರುಗಿತು. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.</p>.<p>ಶಾಂತಲಿಂಗೇಶ್ವರ ದೇವರ ಮೂರ್ತಿ ಪಲ್ಲಕ್ಕಿ ಉತ್ಸವವು ಗ್ರಾಮದ ಮುಖ್ಯಬೀದಿಗಳ ಮೂಲಕ ರಥೋತ್ಸವ ಸ್ಥಳಕ್ಕೆ ಆಗಮಿಸಿತು. ಈ ಸಂದರ್ಭದಲ್ಲಿ 20ಕ್ಕೂ ಹೆಚ್ಚು ಜನ ಪುರವಂತರ ಕುಣಿತವು ಗಮನ ಸೆಳೆಯಿತು. ಭಾಜಾ ಭಜಂತ್ರಿ ಮತ್ತು ಸಾಂಪ್ರದಾಯಿಕ ವಾದ್ಯಗಳ ಸಡಗರದ ಮುಂದೆ ಯುವಕರ ಕುಣಿತ, ಉತ್ಸಾಹವೂ ಜೋರಾಗಿತ್ತು.</p>.<p>ಪೀಠಾಧಿಪತಿ ವೀರಭದ್ರ ಶ್ರೀಗಳು ಪುಷ್ಪಾಲಂಕೃತವಾದ ಮಹಾರಥಕ್ಕೆ ಪೂಜೆ ಸಲ್ಲಿಸಿದ ನಂತರ ಭಕ್ತರು ರಥವನ್ನು ಎಳೆದರು.</p>.<p>ಸುತ್ತಲಿನ ಮಹಿಳೆಯರು, ಮಕ್ಕಳಾದಿಯಾಗಿ ಭಕ್ತರು ಉತ್ತತ್ತಿ, ಬಾಳೆಹಣ್ಣು, ಕೋಬರಿ ಮತ್ತಿತರ ಫಲಪುಷ್ಪಗಳನ್ನು ರಥದ ಮೇಲೆ ಸಮರ್ಪಿಸಿ ತಮ್ಮಹರಕೆ ತೀರಿಸಿದರು. ಯುವಕರೂ ಶಾಂತಲಿಂಗೇಶ್ವರ ಮಹಾರಾಜ ಕೀ ಜೈ... ವೀರಭದ್ರ ಶಿವಾಚಾರ್ಯರಿಗೆ ಜೈ... ಎಂದು ಜಯಘೋಷ ಮೊಳಗಿಸಿದರು.</p>.<p>ಕಿಣಿಸುಲ್ತಾನದ ಶಿವಶಾಂತಲಿಂಗ ಸ್ವಾಮೀಜಿ, ಹೊದಲೂರು, ಬಂಗರಗಾ ಮಠಾಧೀಶರು ಉಪಸ್ಥಿತರಿದ್ದರು. ವಿವಿಧ ಭಾಗದ ಗ್ರಾಮಸ್ಥರು ಪಾಲ್ಗೊಂಡಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260326-31-2103820558</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಆಳಂದ: ತಾಲ್ಲೂಕಿನ ಕಡಗಂಚಿ ಗ್ರಾಮದ ಆರಾಧ್ಯದೈವ ಶಾಂತಲಿಂಗೇಶ್ವರ ದೇವರ 396ನೇ ಜಾತ್ರೆ ಅಂಗವಾಗಿ ಬುಧವಾರ ರಥೋತ್ಸವ ಸಂಭ್ರಮದಿಂದ ಜರುಗಿತು. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.</p>.<p>ಶಾಂತಲಿಂಗೇಶ್ವರ ದೇವರ ಮೂರ್ತಿ ಪಲ್ಲಕ್ಕಿ ಉತ್ಸವವು ಗ್ರಾಮದ ಮುಖ್ಯಬೀದಿಗಳ ಮೂಲಕ ರಥೋತ್ಸವ ಸ್ಥಳಕ್ಕೆ ಆಗಮಿಸಿತು. ಈ ಸಂದರ್ಭದಲ್ಲಿ 20ಕ್ಕೂ ಹೆಚ್ಚು ಜನ ಪುರವಂತರ ಕುಣಿತವು ಗಮನ ಸೆಳೆಯಿತು. ಭಾಜಾ ಭಜಂತ್ರಿ ಮತ್ತು ಸಾಂಪ್ರದಾಯಿಕ ವಾದ್ಯಗಳ ಸಡಗರದ ಮುಂದೆ ಯುವಕರ ಕುಣಿತ, ಉತ್ಸಾಹವೂ ಜೋರಾಗಿತ್ತು.</p>.<p>ಪೀಠಾಧಿಪತಿ ವೀರಭದ್ರ ಶ್ರೀಗಳು ಪುಷ್ಪಾಲಂಕೃತವಾದ ಮಹಾರಥಕ್ಕೆ ಪೂಜೆ ಸಲ್ಲಿಸಿದ ನಂತರ ಭಕ್ತರು ರಥವನ್ನು ಎಳೆದರು.</p>.<p>ಸುತ್ತಲಿನ ಮಹಿಳೆಯರು, ಮಕ್ಕಳಾದಿಯಾಗಿ ಭಕ್ತರು ಉತ್ತತ್ತಿ, ಬಾಳೆಹಣ್ಣು, ಕೋಬರಿ ಮತ್ತಿತರ ಫಲಪುಷ್ಪಗಳನ್ನು ರಥದ ಮೇಲೆ ಸಮರ್ಪಿಸಿ ತಮ್ಮಹರಕೆ ತೀರಿಸಿದರು. ಯುವಕರೂ ಶಾಂತಲಿಂಗೇಶ್ವರ ಮಹಾರಾಜ ಕೀ ಜೈ... ವೀರಭದ್ರ ಶಿವಾಚಾರ್ಯರಿಗೆ ಜೈ... ಎಂದು ಜಯಘೋಷ ಮೊಳಗಿಸಿದರು.</p>.<p>ಕಿಣಿಸುಲ್ತಾನದ ಶಿವಶಾಂತಲಿಂಗ ಸ್ವಾಮೀಜಿ, ಹೊದಲೂರು, ಬಂಗರಗಾ ಮಠಾಧೀಶರು ಉಪಸ್ಥಿತರಿದ್ದರು. ವಿವಿಧ ಭಾಗದ ಗ್ರಾಮಸ್ಥರು ಪಾಲ್ಗೊಂಡಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260326-31-2103820558</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>