ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3ನೇ ದಿನವೂ ಪತ್ತೆಯಾಗದ ಮಾಣಿಕಮ್ಮ

ಘಟನಾ ಸ್ಥಳಕ್ಕೆ ಉಪವಿಭಾಗಾಧಿಕಾರಿ ಬಿ.ವಿ.ಅಶ್ವಿಜಾ ಭೇಟಿ
Last Updated 18 ಜುಲೈ 2021, 16:22 IST
ಅಕ್ಷರ ಗಾತ್ರ

ಸೇಡಂ: ತಾಲ್ಲೂಕಿನ ಕಾಗಿಣಾ ನದಿಯಲ್ಲಿ ಜು.16ರಂದು ಕೊಚ್ಚಿಕೊಂಡು ಹೋದ ಸಂಗಾವಿ (ಎಂ) ಗ್ರಾಮದ ಮಾಣಿಕಮ್ಮ ಮೂರನೇ ದಿನವೂ ಪತ್ತೆಯಾಗಲಿಲ್ಲ.

ಮಾಣಿಕಮ್ಮ ಅವರಿಗಾಗಿ ಭಾನುವಾರ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ಮೀನುಗಾರರು ಮತ್ತು ರಕ್ಷಣಾ ಪಡೆಯ ಸಿಬ್ಬಂದಿ ನಿರಂತರ ಶೋಧನಾ ಕಾರ್ಯ ನಡೆಸಿದರು.

ಬುಧವಾರ ಚಿತ್ತಾಪೂರ ತಾಲ್ಲೂಕಿನ ದಂಡೋತಿ, ಮುಡಬೂಳ ಮತ್ತು ಬಾಗೋಡಿ ಗ್ರಾಮಕ್ಕೆ ಹೊಂದಿಕೊಂಡ ಕಾಗಿಣಾ ನದಿ ದಡದಲ್ಲಿ ಶೋಧನೆ ನಡೆಸಲಾಗಿತ್ತು. ಮಧ್ಯಾಹ್ನ ಸುರಿದ ಭಾರಿ ಮಳೆಯಿಂದಾಗಿ ಶೋಧನಾ ಕಾರ್ಯ ಸ್ಥಗಿತಗೊಂಡಿತ್ತು. ಭಾನುವಾರದ ಕಾರ್ಯಕ್ಕೂ ಮಳೆ ಅಡ್ಡಿಯಾಗಿದೆ. ಮೂರನೇ ದಿನವಾದರೂ ಮಾಣಿಕಮ್ಮ ಪತ್ತೆಯಾಗಿಲಿಲ್ಲ. ಇದರಿಂದ ಕುಟುಂಬ ಸದಸ್ಯರು ದುಃಖದಲ್ಲಿ ಮುಳುಗಿದರು.

ಉಪವಿಭಾಗಾಧಿಕಾರಿ ಭೇಟಿ:ಘಟನಾ ಸ್ಥಳಕ್ಕೆ ಉಪವಿಭಾಗಾಧಿಕಾರಿ ಬಿ.ವಿ.ಅಶ್ವಿಜಾ ಅವರು ಭಾನುವಾರ ಭೇಟಿ ನೀಡಿ ಮಾಹಿತಿ ಪಡೆದು, ಶೋಧನಾ ಕಾರ್ಯ ಚುರುಕುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ನಂತರ ಕುಟುಂಬದ ಪರಿಸ್ಥಿತಿಯ ಕುರಿತು ಅವಲೋಕಿಸಿದರು. ಕಂದಾಯ ಅಧಿಕಾರಿಗಳ ಜತೆಗೂ ಚರ್ಚಿಸಿದರು. ’ಮಾಣಿಕಮ್ಮ ಪತ್ತೆಯಾಗುವವರೆಗೂ ಶೋಧಕಾರ್ಯ ಮುಂದುವರಿಸಬೇಕು’ ಎಂದು ಪೊಲೀಸರಿಗೆ ತಾಕೀತು ಮಾಡಿದರು ಎನ್ನಲಾಗಿದೆ.

ಕಂದಾಯ ನಿರೀಕ್ಷಕ ಅಮರೇಶ, ಪಿಎಸ್‌ಐ ಪೃಥ್ವಿರಾಜ ತಿವಾರಿ, ಗ್ರಾಮಸ್ಥರಾದ ಚನ್ನಬಸ್ಸಪ್ಪ ಹಾಗರಗಿ, ರಾಜು ಕಟ್ಟಿ ಸೇರಿದಂತೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT