<p>ಕಲಬುರಗಿ: ತಾಲ್ಲೂಕಿನ ಭೀಮಳ್ಳಿಯಲ್ಲಿ ವಾಹನಗಳನ್ನು ಸೈಡ್ ತೆಗೆದುಕೊಳ್ಳುವ ವಿಚಾರವಾಗಿ ಗುಂಪೊಂದು ಕಾರಿನಲ್ಲಿದ್ದ ಕುಟುಂಬವೊಂದರ ಮೇಲೆ ಕೈ ಹಾಗೂ ಕಟ್ಟಿಗೆಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದೆ. ಈ ಕುರಿತ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.</p>.<p>ಚಿತ್ತಾಪುರ ತಾಲ್ಲೂಕಿನ ನಾಲವಾರ ಗ್ರಾಮದ ತೋಟೇಂದ್ರ (35), ಸುನೀಲ್ (32), ಅನಸಮ್ಮ (54), ಪೂಜಾ (30) ಮತ್ತು ಅನಿಲ್ (28) ಎಂಬುವರು ಗಾಯಗೊಂಡಿದ್ದಾರೆ.</p>.<p>ನಾಲವಾರ ಗ್ರಾಮದ ತೋಟೇಂದ್ರ ಅವರ ಕುಟುಂಬವು ಆಳಂದ ತಾಲ್ಲೂಕಿನ ಗೋಳಾ(ಬಿ) ಗ್ರಾಮದಲ್ಲಿ ಲಕ್ಕಮ್ಮ ದೇವರ ಕಾರ್ಯ ಹಮ್ಮಿಕೊಂಡಿತ್ತು. ಅದನ್ನು ಮುಗಿಸಿ ಕಾರಿನಲ್ಲಿ ತಂಗಿಯನ್ನು ಬಿಡಲು ಭೀಮಳ್ಳಿಗೆ ಹೊರಟ್ಟಿತ್ತು. ಈ ವೇಳೆ ಭೀಮಳ್ಳಿ ಗ್ರಾಮದಲ್ಲಿ ರಸ್ತೆಯ ಎರಡೂ ಬದಿಗೆ ಆಟೊಗಳು ನಿಂತಿದ್ದವು. ಎಡಬದಿಯ ಆಟೊ ತುಸು ಸೈಡ್ ತೆಗೆದುಕೊಂಡರೂ ಕಾರು ದಾಟಲು ಜಾಗ ಇರಲಿಲ್ಲ. ಈ ವಿಚಾರವಾಗಿ ಗಲಾಟೆ ನಡೆದಿದ್ದು, ಸ್ಥಳೀಯರು ದೊಣ್ಣೆ, ಕೈಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ದಾಳಿಯ ಹೊಡೆತಕ್ಕೆ ಇಬ್ಬರಿಗೆ ತಲೆಗೆ, ಒಬ್ಬರಿಗೆ ಮೂಗಿಗೆ ಹಾಗೂ ಇನ್ನೊಬ್ಬರಿಗೆ ಕೈಗೆ ಗಂಭೀರ ಗಾಯವಾಗಿದೆ. ಒಬ್ಬರಿಗೆ ಗುಪ್ತಗಾಯವಾಗಿದೆ. ಗಾಯಾಳುಗಳು ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.</p>.<p>‘ಕಾರಣವೇ ಇಲ್ಲದೇ ಮುಸ್ಲಿಂ ಸಮುದಾಯದ ಯುವಕರು ಗುಂಪು ಕಟ್ಟಿಕೊಂಡು ಬಂದು ಹಲ್ಲೆ ನಡೆಸಿದ್ದಾರೆ’ ಎಂದು ಗಾಯಾಳುಗಳು ಆರೋಪಿಸಿದ್ದಾರೆ. ಈ ಕುರಿತು ಸಬ್ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260425-34-990109342</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಲಬುರಗಿ: ತಾಲ್ಲೂಕಿನ ಭೀಮಳ್ಳಿಯಲ್ಲಿ ವಾಹನಗಳನ್ನು ಸೈಡ್ ತೆಗೆದುಕೊಳ್ಳುವ ವಿಚಾರವಾಗಿ ಗುಂಪೊಂದು ಕಾರಿನಲ್ಲಿದ್ದ ಕುಟುಂಬವೊಂದರ ಮೇಲೆ ಕೈ ಹಾಗೂ ಕಟ್ಟಿಗೆಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದೆ. ಈ ಕುರಿತ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.</p>.<p>ಚಿತ್ತಾಪುರ ತಾಲ್ಲೂಕಿನ ನಾಲವಾರ ಗ್ರಾಮದ ತೋಟೇಂದ್ರ (35), ಸುನೀಲ್ (32), ಅನಸಮ್ಮ (54), ಪೂಜಾ (30) ಮತ್ತು ಅನಿಲ್ (28) ಎಂಬುವರು ಗಾಯಗೊಂಡಿದ್ದಾರೆ.</p>.<p>ನಾಲವಾರ ಗ್ರಾಮದ ತೋಟೇಂದ್ರ ಅವರ ಕುಟುಂಬವು ಆಳಂದ ತಾಲ್ಲೂಕಿನ ಗೋಳಾ(ಬಿ) ಗ್ರಾಮದಲ್ಲಿ ಲಕ್ಕಮ್ಮ ದೇವರ ಕಾರ್ಯ ಹಮ್ಮಿಕೊಂಡಿತ್ತು. ಅದನ್ನು ಮುಗಿಸಿ ಕಾರಿನಲ್ಲಿ ತಂಗಿಯನ್ನು ಬಿಡಲು ಭೀಮಳ್ಳಿಗೆ ಹೊರಟ್ಟಿತ್ತು. ಈ ವೇಳೆ ಭೀಮಳ್ಳಿ ಗ್ರಾಮದಲ್ಲಿ ರಸ್ತೆಯ ಎರಡೂ ಬದಿಗೆ ಆಟೊಗಳು ನಿಂತಿದ್ದವು. ಎಡಬದಿಯ ಆಟೊ ತುಸು ಸೈಡ್ ತೆಗೆದುಕೊಂಡರೂ ಕಾರು ದಾಟಲು ಜಾಗ ಇರಲಿಲ್ಲ. ಈ ವಿಚಾರವಾಗಿ ಗಲಾಟೆ ನಡೆದಿದ್ದು, ಸ್ಥಳೀಯರು ದೊಣ್ಣೆ, ಕೈಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ದಾಳಿಯ ಹೊಡೆತಕ್ಕೆ ಇಬ್ಬರಿಗೆ ತಲೆಗೆ, ಒಬ್ಬರಿಗೆ ಮೂಗಿಗೆ ಹಾಗೂ ಇನ್ನೊಬ್ಬರಿಗೆ ಕೈಗೆ ಗಂಭೀರ ಗಾಯವಾಗಿದೆ. ಒಬ್ಬರಿಗೆ ಗುಪ್ತಗಾಯವಾಗಿದೆ. ಗಾಯಾಳುಗಳು ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.</p>.<p>‘ಕಾರಣವೇ ಇಲ್ಲದೇ ಮುಸ್ಲಿಂ ಸಮುದಾಯದ ಯುವಕರು ಗುಂಪು ಕಟ್ಟಿಕೊಂಡು ಬಂದು ಹಲ್ಲೆ ನಡೆಸಿದ್ದಾರೆ’ ಎಂದು ಗಾಯಾಳುಗಳು ಆರೋಪಿಸಿದ್ದಾರೆ. ಈ ಕುರಿತು ಸಬ್ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260425-34-990109342</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>