<p><strong>ಕಲಬುರಗಿ:</strong> ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಸರ್ಕಾರದ ಈ ಅವಧಿಯಲ್ಲಿ ಮಂಡಿಸಿದ ಹಿಂದಿನ ಬಜೆಟ್ಗಳಂತೆ, ಈಗ ಮಂಡಿಸಿದ ಬಜೆಟ್ ಶೂನ್ಯ ಅಭಿವೃದ್ಧಿ ಬಜೆಟ್ ಸಾಲಿಗೆ ಸೇರಿಸುವ ಕೆಲಸ ಮಾಡಿದ್ದಾರೆ’ ಎಂದು ಬಿಜೆಪಿ ಕಲಬುರಗಿ ವಿಭಾಗದ ಪ್ರಭಾರಿ ಅರುಣ ಶಹಾಪುರ ಆರೋಪಿಸಿದರು.</p>.<p>ಇಲ್ಲಿನ ಖಾಸಗಿ ಹೋಟಲ್ನಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆರ್ಥಿಕ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಎಡವಿದ್ದು, ಬಜೆಟ್ನ ಶೇ20ರಷ್ಟು ಹಣ ಸಾಲ ಮರುಪಾವತಿಗೆ ನೀಡಲಾಗುತ್ತಿದೆ. ಅತಿ ಹೆಚ್ಚು ಬಾರಿ ಬಜೆಟ್ ಮಂಡನೆ ಮಾಡಿದ್ದೇನೆ ಎಂದು ಹೇಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅತಿ ಹೆಚ್ಚು ಸಾಲಗಾರರ ರಾಜ್ಯವನ್ನಾಗಿ ಮಾಡಿದ ಅಪಕೀರ್ತಿ ಸಲ್ಲುತ್ತದೆ’ ಎಂದರು.</p>.<p>‘ಕೆಕೆಆರ್ಡಿಬಿಗೆ ನಬಾರ್ಡ್, ಎಡಿಬಿ ಬ್ಯಾಂಕ್ ಸೇರಿ ಇತರೆ ಮೂಲಗಳಿಂದ ₹5 ಸಾವಿರ ಕೋಟಿ ಅನುದಾನ ನೀಡುತ್ತೇವೆ ಎಂದು ಹೇಳಿದ್ದಾರೆ. ಕೆಕೆಆರ್ಡಿಬಿ ಎಂಬುದನ್ನು ಶಂಖವನ್ನಾಗಿ ಮಾಡಿ ಅದರಲ್ಲಿ ನೀರು ಹಾಕಿ ತೀರ್ಥ ಎಂದು ಕೊಡುವ ಕೆಲಸ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. 371(ಜೆ) ಆಶಯ ಈಡೇರಬೇಕಾದರೆ ಎಲ್ಲ ಇಲಾಖೆಗಳಿಗೆ ಸರ್ಕಾರ ನೀಡುವ ಅನುದಾನದ ಜೊತೆ ಕೆಕೆಆರ್ಬಿಗೆ ಪ್ರತ್ಯೇಕ ಅನುದಾನ ನೀಡಿದಾಗ ಮಾತ್ರ ಅಭಿವೃದ್ಧಿ ಸಾಧ್ಯ. ಆರೋಗ್ಯ ಹಾಗೂ ಶಿಕ್ಷಣ ಇಲಾಖೆಗೆ ಕೆಕೆಆರ್ಡಿಬಿ ಅನುದಾನ ಬಿಟ್ಟು ಪ್ರತ್ಯೇಕ ಅನುದಾನ ನೀಡಬೇಕು’ ಎಂದರು.</p>.<p>‘ಸರ್ಕಾರ ರಚನೆಯಾಗಿ ಮೂರು ವರ್ಷ ಕಳೆದರೂ ಒಂದೂ ಹೊಸ ನೇಮಕಾತಿ ಮಾಡಿಲ್ಲ. 50 ಸಾವಿರ ಹುದ್ದೆಗಳ ನೇಮಕಾತಿ ಮಾಡುತ್ತೇವೆ ಎಂದು ಬಜೆಟ್ನಲ್ಲಿ ಹೇಳಿದ್ದಾರೆ. ಈ ನೇಮಕಾತಿ ಪೂರ್ಣವಾಗಲು ಸುಮಾರು 3 ವರ್ಷ ಕಾಲಾವಧಿ ಬೇಕು. ಶೇ 56 ಮೀಸಲು ಬದಲು ಶೇ50ಕ್ಕೆ ಸಿಮಿತಗೊಳಿಸಿ ನೇಮಕಾತಿ ಮಾಡಲು ಮುಂದಾಗಿದ್ದಾರೆ. ಅವರ ಸಚಿವರೇ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಸರ್ಕಾರ ನಿಲುವು ಏನು ಎಂಬುದು ಜನರಿಗೆ ಸರ್ಕಾರ ತಿಳಿಸಬೇಕು’ ಎಂದರು.</p>.<p>ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಕಲಬುರಗಿ ವಿಭಾಗದ ಸಹ ಉಸ್ತುವಾರಿ ಶರಣಪ್ಪ ತಳವಾರ, ಬಿಜೆಪಿ ಗ್ರಾಮಾಂತರ ಘಟಕದ ಜಿಲ್ಲಾಧ್ಯಕ್ಷ ಅಶೋಕ ಬಗಲಿ, ಒಬಿಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಅವ್ವಣ್ಣ ಮ್ಯಾಕೇರಿ, ಮಾಜಿ ಸಚಿವ ಬಾಬುರಾವ ಚವ್ಹಾಣ, ಬಿಜೆಪಿ ಗ್ರಾಮಾಂತರ ಘಟಕದ ಮಾಜಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ಎಸ್ಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಧರ್ಮಣ್ಣ ಇಟಗಾ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಬೆಣ್ಣೂರುಕರ್, ಅಂಬಾರಾಯ ಅಷ್ಟಗಿ ಹಾಗೂ ಇತರರು ಹಾಜರಿದ್ದರು.</p>.<p><strong>ಸಚಿವರು ಫಲಿತಾಂಶ ಸುಧಾರಣೆಗೆ ಗಮನ ಹರಿಸಲಿ’ ‘</strong></p><p>ಕಲ್ಯಾಣ ಕರ್ನಾಟಕ ಭಾಗದಲ್ಲಿ 65 ಸಾವಿರ ಹುದ್ದೆಗಳು ಖಾಲಿ ಇವೆ. ಅದರ ನೇಮಕಕ್ಕೆ ಅವಕಾಶ ಸಿಕ್ಕಿಲ್ಲ. ಶಿಕ್ಷಣ ಕ್ಷೇತ್ರದಲ್ಲಿ ಖಾಲಿ ಹುದ್ದೆಗಳಿಂದ ಈ ಭಾಗದ ಫಲಿತಾಂಶ ಕುಸಿತವಾಗುತ್ತಿದೆ. ರಾಜ್ಯ ಹಾಗೂ ರಾಷ್ಟ್ರದ ವಿಷಯಗಳ ಬಗ್ಗೆ ಮಾತನಾಡುವ ಸಚಿವ ಪ್ರಿಯಾಂಕ್ ಖರ್ಗೆ ಅವರು ಈ ವಿಷಯದ ಬಗ್ಗೆ ಗಮನ ಹರಿಸಬೇಕಿತ್ತು’ ಎಂದು ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ರಾಜುಕುಮಾರ ಪಾಟೀಲ ತೇಲ್ಕೂರ ಹೇಳಿದರು. ‘ರಾಜ್ಯ ಬಜೆಟ್ನಲ್ಲಿ ಈ ಭಾಗದ ಜನರ ಕಣ್ಣು ಒರೆಸುವ ಕೆಲಸ ಸರ್ಕಾರ ಮಾಡಿದೆ. ಪ್ರತ್ಯೇಕ ಸಚಿವಾಲಯ ಸಿಬ್ಬಂದಿ ನೇಮಕ ಹಾಗೂ ಅಭಿವೃದ್ಧಿಗೆ ಹಣ ತೆಗೆದು ಇಡುವ ಕೆಲಸ ಬಜೆಟ್ನಲ್ಲಿ ಆಗಿಲ್ಲ. ನೀರಾವರಿ ಹಾಗೂ ಏತ ನೀರಾವರಿಗೆ ಅನುದಾನ ಇಟ್ಟಿಲ್ಲ. ಐಟಿಬಿಟಿ ಸಚಿವರು ಈ ಭಾಗದಲ್ಲಿ ಐಟಿಬಿಟಿ ಪಾರ್ಕ್ ಮಂಜೂರು ಮಾಡುತ್ತಾರೆ. ಅದಕ್ಕೆ ಅನುದಾನ ಒದಗಿಸುತ್ತಾರೆ ಎಂಬ ನಿರೀಕ್ಷೆ ಇತ್ತು. ಭರವಸೆ ಹುಸಿಯಾಗಿದೆ’ ಎಂದರು. ‘ಕೆಕೆಆರ್ಡಿಬಿ ಅನುದಾನ ದೂರುಪಯೋಗವಾಗುತ್ತಿದೆ. ಈ ಅನುದಾನವನ್ನು ಲೋಕೋಪಯೋಗಿ ಇಲಾಖೆ ಗ್ರಾಮೀಣಾಭಿವೃದ್ಧಿ ಇಲಾಖೆಯ ಅನುದಾನ ಎಂಬಂತೆ ಬಳಕೆಯಾಗುತ್ತಿದೆ. ಇನ್ನೊಂದೆಡೆ ಉಡಾನ್ ಯೋಜನೆಯಡಿ ಜನರು ಪ್ರಯಾಣ ಮಾಡಲು ಕೆಕೆಆರ್ಡಿಬಿ ಅಭಿವೃದ್ಧಿ ಅನುದಾನ ಬಳಕೆಯಾಗುತ್ತಿರುವುದು ಸರಿಯಲ್ಲ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರಗಿ:</strong> ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಸರ್ಕಾರದ ಈ ಅವಧಿಯಲ್ಲಿ ಮಂಡಿಸಿದ ಹಿಂದಿನ ಬಜೆಟ್ಗಳಂತೆ, ಈಗ ಮಂಡಿಸಿದ ಬಜೆಟ್ ಶೂನ್ಯ ಅಭಿವೃದ್ಧಿ ಬಜೆಟ್ ಸಾಲಿಗೆ ಸೇರಿಸುವ ಕೆಲಸ ಮಾಡಿದ್ದಾರೆ’ ಎಂದು ಬಿಜೆಪಿ ಕಲಬುರಗಿ ವಿಭಾಗದ ಪ್ರಭಾರಿ ಅರುಣ ಶಹಾಪುರ ಆರೋಪಿಸಿದರು.</p>.<p>ಇಲ್ಲಿನ ಖಾಸಗಿ ಹೋಟಲ್ನಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆರ್ಥಿಕ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಎಡವಿದ್ದು, ಬಜೆಟ್ನ ಶೇ20ರಷ್ಟು ಹಣ ಸಾಲ ಮರುಪಾವತಿಗೆ ನೀಡಲಾಗುತ್ತಿದೆ. ಅತಿ ಹೆಚ್ಚು ಬಾರಿ ಬಜೆಟ್ ಮಂಡನೆ ಮಾಡಿದ್ದೇನೆ ಎಂದು ಹೇಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅತಿ ಹೆಚ್ಚು ಸಾಲಗಾರರ ರಾಜ್ಯವನ್ನಾಗಿ ಮಾಡಿದ ಅಪಕೀರ್ತಿ ಸಲ್ಲುತ್ತದೆ’ ಎಂದರು.</p>.<p>‘ಕೆಕೆಆರ್ಡಿಬಿಗೆ ನಬಾರ್ಡ್, ಎಡಿಬಿ ಬ್ಯಾಂಕ್ ಸೇರಿ ಇತರೆ ಮೂಲಗಳಿಂದ ₹5 ಸಾವಿರ ಕೋಟಿ ಅನುದಾನ ನೀಡುತ್ತೇವೆ ಎಂದು ಹೇಳಿದ್ದಾರೆ. ಕೆಕೆಆರ್ಡಿಬಿ ಎಂಬುದನ್ನು ಶಂಖವನ್ನಾಗಿ ಮಾಡಿ ಅದರಲ್ಲಿ ನೀರು ಹಾಕಿ ತೀರ್ಥ ಎಂದು ಕೊಡುವ ಕೆಲಸ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. 371(ಜೆ) ಆಶಯ ಈಡೇರಬೇಕಾದರೆ ಎಲ್ಲ ಇಲಾಖೆಗಳಿಗೆ ಸರ್ಕಾರ ನೀಡುವ ಅನುದಾನದ ಜೊತೆ ಕೆಕೆಆರ್ಬಿಗೆ ಪ್ರತ್ಯೇಕ ಅನುದಾನ ನೀಡಿದಾಗ ಮಾತ್ರ ಅಭಿವೃದ್ಧಿ ಸಾಧ್ಯ. ಆರೋಗ್ಯ ಹಾಗೂ ಶಿಕ್ಷಣ ಇಲಾಖೆಗೆ ಕೆಕೆಆರ್ಡಿಬಿ ಅನುದಾನ ಬಿಟ್ಟು ಪ್ರತ್ಯೇಕ ಅನುದಾನ ನೀಡಬೇಕು’ ಎಂದರು.</p>.<p>‘ಸರ್ಕಾರ ರಚನೆಯಾಗಿ ಮೂರು ವರ್ಷ ಕಳೆದರೂ ಒಂದೂ ಹೊಸ ನೇಮಕಾತಿ ಮಾಡಿಲ್ಲ. 50 ಸಾವಿರ ಹುದ್ದೆಗಳ ನೇಮಕಾತಿ ಮಾಡುತ್ತೇವೆ ಎಂದು ಬಜೆಟ್ನಲ್ಲಿ ಹೇಳಿದ್ದಾರೆ. ಈ ನೇಮಕಾತಿ ಪೂರ್ಣವಾಗಲು ಸುಮಾರು 3 ವರ್ಷ ಕಾಲಾವಧಿ ಬೇಕು. ಶೇ 56 ಮೀಸಲು ಬದಲು ಶೇ50ಕ್ಕೆ ಸಿಮಿತಗೊಳಿಸಿ ನೇಮಕಾತಿ ಮಾಡಲು ಮುಂದಾಗಿದ್ದಾರೆ. ಅವರ ಸಚಿವರೇ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಸರ್ಕಾರ ನಿಲುವು ಏನು ಎಂಬುದು ಜನರಿಗೆ ಸರ್ಕಾರ ತಿಳಿಸಬೇಕು’ ಎಂದರು.</p>.<p>ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಕಲಬುರಗಿ ವಿಭಾಗದ ಸಹ ಉಸ್ತುವಾರಿ ಶರಣಪ್ಪ ತಳವಾರ, ಬಿಜೆಪಿ ಗ್ರಾಮಾಂತರ ಘಟಕದ ಜಿಲ್ಲಾಧ್ಯಕ್ಷ ಅಶೋಕ ಬಗಲಿ, ಒಬಿಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಅವ್ವಣ್ಣ ಮ್ಯಾಕೇರಿ, ಮಾಜಿ ಸಚಿವ ಬಾಬುರಾವ ಚವ್ಹಾಣ, ಬಿಜೆಪಿ ಗ್ರಾಮಾಂತರ ಘಟಕದ ಮಾಜಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ಎಸ್ಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಧರ್ಮಣ್ಣ ಇಟಗಾ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಬೆಣ್ಣೂರುಕರ್, ಅಂಬಾರಾಯ ಅಷ್ಟಗಿ ಹಾಗೂ ಇತರರು ಹಾಜರಿದ್ದರು.</p>.<p><strong>ಸಚಿವರು ಫಲಿತಾಂಶ ಸುಧಾರಣೆಗೆ ಗಮನ ಹರಿಸಲಿ’ ‘</strong></p><p>ಕಲ್ಯಾಣ ಕರ್ನಾಟಕ ಭಾಗದಲ್ಲಿ 65 ಸಾವಿರ ಹುದ್ದೆಗಳು ಖಾಲಿ ಇವೆ. ಅದರ ನೇಮಕಕ್ಕೆ ಅವಕಾಶ ಸಿಕ್ಕಿಲ್ಲ. ಶಿಕ್ಷಣ ಕ್ಷೇತ್ರದಲ್ಲಿ ಖಾಲಿ ಹುದ್ದೆಗಳಿಂದ ಈ ಭಾಗದ ಫಲಿತಾಂಶ ಕುಸಿತವಾಗುತ್ತಿದೆ. ರಾಜ್ಯ ಹಾಗೂ ರಾಷ್ಟ್ರದ ವಿಷಯಗಳ ಬಗ್ಗೆ ಮಾತನಾಡುವ ಸಚಿವ ಪ್ರಿಯಾಂಕ್ ಖರ್ಗೆ ಅವರು ಈ ವಿಷಯದ ಬಗ್ಗೆ ಗಮನ ಹರಿಸಬೇಕಿತ್ತು’ ಎಂದು ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ರಾಜುಕುಮಾರ ಪಾಟೀಲ ತೇಲ್ಕೂರ ಹೇಳಿದರು. ‘ರಾಜ್ಯ ಬಜೆಟ್ನಲ್ಲಿ ಈ ಭಾಗದ ಜನರ ಕಣ್ಣು ಒರೆಸುವ ಕೆಲಸ ಸರ್ಕಾರ ಮಾಡಿದೆ. ಪ್ರತ್ಯೇಕ ಸಚಿವಾಲಯ ಸಿಬ್ಬಂದಿ ನೇಮಕ ಹಾಗೂ ಅಭಿವೃದ್ಧಿಗೆ ಹಣ ತೆಗೆದು ಇಡುವ ಕೆಲಸ ಬಜೆಟ್ನಲ್ಲಿ ಆಗಿಲ್ಲ. ನೀರಾವರಿ ಹಾಗೂ ಏತ ನೀರಾವರಿಗೆ ಅನುದಾನ ಇಟ್ಟಿಲ್ಲ. ಐಟಿಬಿಟಿ ಸಚಿವರು ಈ ಭಾಗದಲ್ಲಿ ಐಟಿಬಿಟಿ ಪಾರ್ಕ್ ಮಂಜೂರು ಮಾಡುತ್ತಾರೆ. ಅದಕ್ಕೆ ಅನುದಾನ ಒದಗಿಸುತ್ತಾರೆ ಎಂಬ ನಿರೀಕ್ಷೆ ಇತ್ತು. ಭರವಸೆ ಹುಸಿಯಾಗಿದೆ’ ಎಂದರು. ‘ಕೆಕೆಆರ್ಡಿಬಿ ಅನುದಾನ ದೂರುಪಯೋಗವಾಗುತ್ತಿದೆ. ಈ ಅನುದಾನವನ್ನು ಲೋಕೋಪಯೋಗಿ ಇಲಾಖೆ ಗ್ರಾಮೀಣಾಭಿವೃದ್ಧಿ ಇಲಾಖೆಯ ಅನುದಾನ ಎಂಬಂತೆ ಬಳಕೆಯಾಗುತ್ತಿದೆ. ಇನ್ನೊಂದೆಡೆ ಉಡಾನ್ ಯೋಜನೆಯಡಿ ಜನರು ಪ್ರಯಾಣ ಮಾಡಲು ಕೆಕೆಆರ್ಡಿಬಿ ಅಭಿವೃದ್ಧಿ ಅನುದಾನ ಬಳಕೆಯಾಗುತ್ತಿರುವುದು ಸರಿಯಲ್ಲ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>